ನೆರೆ ಹಾನಿಗೊಳಗಾದ ರಸ್ತೆ, ಶಾಲೆಗಳ ದುರಸ್ತಿ ಕಾಮಗಾರಿಗಳಿಗೆ ತುರ್ತಾಗಿ ರೂ.500 ಕೋಟಿ ಬಿಡುಗಡೆ: ಕಂದಾಯ ಸಚಿವ

ನೆರೆ,ಮಳೆಯಿಂದ ಹಾನಿಗೊಳಗಾದ ಆಸ್ತಿಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ, ಶಾಲೆ ದುರಸ್ತಿ ಕಾಮಗಾರಿಗಳಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದರು.
ಆರ್‌.ಅಶೋಕ್
ಆರ್‌.ಅಶೋಕ್

ಬೆಂಗಳೂರು: ನೆರೆ, ಮಳೆಯಿಂದ ಹಾನಿಗೊಳಗಾದ ಆಸ್ತಿಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.ರಸ್ತೆ, ಶಾಲೆ ದುರಸ್ತಿ ಕಾಮಗಾರಿಗಳಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುರ್ತಾಗಿ ದುರಸ್ತಿ ಕಾಮಗಾರಿ ಗಳಿಗಾಗಿ ಬೆಳಗಾವಿಗೆ 200 ಕೋಟಿ ರೂ, ಬಾಗಲಕೋಟೆಗೆ 50 ಕೋಟಿ ರೂ, ಚಿಕ್ಕಮಗಳೂರು ಜಿಲ್ಲೆಗೆ 20 ಕೋಟಿ, ಶಿವಮೊಗ್ಗ ಜಿಲ್ಲೆಗೆ 10 ಕೋಟಿ, ಉ.ಕನ್ನಡ 25 ಕೋಟಿ ರೂ ,ದಕ್ಷಿಣ ಕನ್ನಡ 35 ಕೋಟಿ, ಧಾರವಾಡ 40 ಕೋಟಿ, ಗದಗ 10 ಕೋಟಿ, ಹಾವೇರಿ 35 ಕೋಟಿ, ಹಾಸನ 15 ಕೋಟಿ, ಕೊಡಗು 10 ಕೋಟಿ, ಮೈಸೂರು 30 ಕೋಟಿ ಹಾಗೂ ಉಡುಪಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com