ಲಾಕ್ ಡೌನ್ ನಿಂದಾದ ಉಪಯೋಗಗಳೇನು? ಏ.14 ನಂತರ ಮುಂದುವರೆಸಬಹುದೇ ಎಂಬ ಬಗ್ಗೆ ಡಾ. ದೇವಿ ಶೆಟ್ಟಿ ಹೇಳಿದ್ದಿಷ್ಟು....

ಕೊರೋನಾ ತಡೆಗೆ 21 ದಿನಗಳ ಲಾಕ್ ಡೌನ್ ನಿಂದಾದ ಪ್ರಯೋಜನಗಳೇನು, ಏ.14 ರ ನಂತರವೂ ಅದನ್ನು ಮುಂದುವರೆಸಬಹುದೇ ಎಂಬ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದಾರೆ. 
ಡಾ. ದೇವಿ ಶೆಟ್ಟಿ
ಡಾ. ದೇವಿ ಶೆಟ್ಟಿ

ಬೆಂಗಳೂರು: ಕೊರೋನಾ ತಡೆಗೆ 21 ದಿನಗಳ ಲಾಕ್ ಡೌನ್ ನಿಂದಾದ ಪ್ರಯೋಜನಗಳೇನು, ಏ.14 ರ ನಂತರವೂ ಅದನ್ನು ಮುಂದುವರೆಸಬಹುದೇ ಎಂಬ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದಾರೆ. 

"21 ದಿನಗಳ ನಂತರ ಲಾಕ್ ಡೌನ್ ನ್ನು ಹಿಂಪಡೆಯಬಹುದು, ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ  ಮಾತ್ರವೇ ಲಾಕ್ ಡೌನ್ ವಿಧಿಸಬಹುದಾಗಿದೆ. ದೇಶಾದ್ಯಂತ 21 ದಿನಗಳ ಲಾಕ್ ಡೌನ್ ನ್ನು ಮುಂದುವರೆಸುವುದು ವೈದ್ಯಕೀಯ ದೃಷ್ಟಿಯಿಂದ ಯಾವುದೇ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. 

ಎಷ್ಟು ಸಾಧ್ಯವೋ ಅಷ್ಟು ಜನರನ್ನು ಪರೀಕ್ಷೆಗೊಳಪಡಿಸಿ, ಯಾವ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತವೋ ಅಲ್ಲಿ ಮಾತ್ರ ಲಾಕ್ ಡೌನ್ ಮಾಡಿಸಿ ಆಗ ಕೊರೋನಾ ಹರಡುವಿಕೆ ತಡೆಗಟ್ಟಬಹುದು ಎಂದು ದೇವಿಶೆಟ್ಟಿ ಹೇಳಿದ್ದಾರೆ. 

ಭಾರತದಲ್ಲಿ ಕೋವಿಡ್-19 ರ ಪ್ರಕರಣಗಳು ಇನ್ನೂ 2-3 ವಾರಗಳು ಏರಿಕೆ ಕಾಣಲಿವೆ. ಈಗಿನ ಪರಿಸ್ಥಿತಿ ನಿಭಾಯಿಸಬಹುದಾಗಿದೆ. 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದ ಕೊರೋನಾ ವೈರಸ್ ಸಾವಿನ ಪ್ರಮಾಣವನ್ನು ಶೇ.50 ರಷ್ಟು ಕಡಿಮೆ ಮಾಡಲಿದೆ. ಈ ಅವಧಿಯ ಲಾಕ್ ಡೌನ್ ನಿಂದ ಬಹಳ ಪ್ರಯೋಜನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡಾ.ದೇವಿಶೆಟ್ಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com