ಬಾಗಲಕೋಟೆ ವ್ಯಕ್ತಿ ಕೊರೋನಾ ಸೋಂಕು ತಗುಲಿದ್ದು ಹೇಗೆ: ರಹಸ್ಯ ಬೇಧಿಸಿದ ಜಿಲ್ಲಾಡಳಿತ

ವಿದೇಶ ಪ್ರವಾಸ ಮಾಡದಿದ್ದರೂ ವ್ಯಕ್ತಿ ಕೊರೋನಾ ಸೋಂಕಿಗೆ ಹೇಗೆ ಬಲಿಯಾದ ಎಂಬ ಪ್ರಶ್ನೆಗೆ ಬಾಗಲಕೋಟೆ ಜಿಲ್ಲಾಡಳಿತ ಕೊನೆಗೂ ಉತ್ತರ ಕಂಡು ಕೊಂಡಿದೆ.
ಬಾಗಲಕೋಟೆ
ಬಾಗಲಕೋಟೆ

ಬಾಗಲಕೋಟೆ: ವಿದೇಶ ಪ್ರವಾಸ ಮಾಡದಿದ್ದರೂ ವ್ಯಕ್ತಿ ಕೊರೋನಾ ಸೋಂಕಿಗೆ ಹೇಗೆ ಬಲಿಯಾದ ಎಂಬ ಪ್ರಶ್ನೆಗೆ ಬಾಗಲಕೋಟೆ ಜಿಲ್ಲಾಡಳಿತ ಕೊನೆಗೂ ಉತ್ತರ ಕಂಡು ಕೊಂಡಿದೆ.

ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಕಲಬುರಗಿಗೆ ಮೃತ ವ್ಯಕ್ತಿಯ ಸಹೋದರ ಪ್ರಯಾಣಿಸಿದ್ದ,  ಹೀಗಾಗಿ ಅಲ್ಲಿಂದ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಸೋಮವಾರ ಜಿಲ್ಲೆಯಿಂದ ಇನ್ನೂ ಎರಡು ಪಾಸಿಟಿವ್ ಪ್ರಕರಣಗಳು ವರದಿಯಾದ ನಂತರ, ಆರೋಗ್ಯ ಅಧಿಕಾರಿಗಳು ಸೋಂಕಿನ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಮೃತ ವ್ಯಕ್ತಿಯ ಸಹೋದರನ ಪ್ರಯಾಣದ ಇತಿಹಾಸ ಪರಿಶೀಲಿಸಿದಾಗ ಮಾರ್ಚ್ 15 ಮತ್ತು 16 ರಂದು ಕಲಬುರಗಿಯಲ್ಲಿ ಇದ್ದದ್ದು ತಿಳಿದು ಬಂದಿದೆ. ಕೊರೋನಾ ಸೋಂಕು ಇದ್ದ ಪ್ರದೇಶದಲ್ಲಿ ಆತ ತಂಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಪ್ರಾಥಮಿಕ ತನಿಖೆಯ ಸಮಯದಲ್ಲಿ, ಜಿಲ್ಲೆಯ ಮೂರನೇ ಪ್ರಕರಣವು ಕಲಬುರಗಿಗೆ ಪ್ರಯಾಣದ ಇತಿಹಾಸವನ್ನು ಹೊಂದಿದೆ ಎಂದು ತಿಳಿದುಬಂದಿದೆ, ಮತ್ತು ಅವರ ಹೆಂಡತಿಯ ಮನೆಯು  ಕೊರೋನಾ ಪಾಸಿಟಿವ್ ಇರುವ ಪ್ರದೇಶದಲ್ಲಿ ಇದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com