ಬೆಂಗಳೂರು: ಕೊರೋನಾ ವೈರಸ್ ಭೀತಿಯಿಂದಾಗಿ ಜೈಲಿನಲ್ಲಿರುವ ಕೆಲವು ಕೈದಿಗಳನ್ನು ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಾರಾಗೃ ಇಲಾಖೆ ಕೈದಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಹೊರಗೆ ಬಂದರೆ ಆರೋಗ್ಯ ಸಮಸ್ಯೆ ಮತ್ತು ಹಣಕಾಸಿನ ಕೊರತೆಯಿಂದಾಗಿ ಜೈಲಿನಿದ ಹೊರಹೋಗಲು ನಿರಾಕರಿಸಿದ್ದಾರೆ.
ಕರ್ನಾಟಕದಲ್ಲಿ 183 ಕೈದಿಗಳನ್ನು ಬಿಡುಗಡೆ ಮಾಡಲು ಉನ್ನತ ಸಮಿತಿ ನಿರ್ಧರಿಸಿದೆ.ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನು ಅವರ ಸನ್ನಡತೆಯ ಆಧಾರದ ಮೇಲೆ ಪೆರೋಲ್ ಹಾಗೂ ವಿಚಾರಣಾಧೀನ ಕೈದಿಗಳನ್ನು ರಿಲೀಸ್ ಮಾಡಲು ಮಾರ್ಚ್ 23 ರಂದ ನ್ಯಾಯಾಲಯ ಸೂಚಿಸಿತ್ತು.
ಅರ್ಹ ಕೈದಿಗಳನ್ನು ರಿಲೀಸ್ ಮಾಡಲು ಅದರಂತೆ ಉನ್ನತ ಸಮಿತಿ ರಚಿಸುವಂತ ಆದೇಶಿಸಿತ್ತು. ಅದರಂತೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದ್ದು 904 ಕೈದಿಗಳ ಬಿಡುಗಡೆಗೆ ನಿರ್ಧರಿಸಿತ್ತು.
ಇದರಲ್ಲಿ 646 ವಿಚಾರಣಾಧೀನ ಕೈದಿಗಳು ಮತ್ತು 258 ಜೀವಾವಧಿ ಶಿಕ್ಷೆಗೆ ಒಳಗಾದವರು,ಇವರಿಗೆ ಪೆರೋಲ್ ಮೇಲೆ ರಿಲೀಸ್ ಮಾಡಲು ನಿರ್ಧರಿಸಿತ್ತು ಎಂದು ಕಾರಾಗೃಹ ಮತ್ತು ಬಂಧೀಖಾನೆ ಇಲಾಖೆಯ ಪ್ರಧಾನ ನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಪೆರೋಲ್ ಮೇಲೆ ಬಿಡುಗಡೆ ಮಾಡಲು ಅರ್ಹರಾಗಿರುವ 183 ಜೈಲಿನಿಂದ ಹೊರ ಹೋಗದೆ ಇರಲು ನಿರ್ಧರಿಸಿದ್ದಾರೆ.
Advertisement