ರಾಜ್ಯದಲ್ಲಿ ಹೆಚ್ಚುತ್ತಿದೆ ವೈರಸ್ ಲಕ್ಷಣ ರಹಿತ ಪ್ರಕರಣಗಳು: ಹೆಚ್ಚಿದ ಆತಂಕ 

ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ಹೊಸ ಮುಖವೊಂದು ಇದೀಗ ಜನರಲ್ಲಿ ಸಾಕಷ್ಟು ಆತಂಕವನ್ನು ಹೆಚ್ಚಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ಹೊಸ ಮುಖವೊಂದು ಇದೀಗ ಜನರಲ್ಲಿ ಸಾಕಷ್ಟು ಆತಂಕವನ್ನು ಹೆಚ್ಚಿಸಿದೆ. 

ರಾಜ್ಯದಲ್ಲಿ ಲಕ್ಷಣ ರಹಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವೊಂದು ಶುರುವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬೆಳಕಿಗೆ ಬರುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಲಕ್ಷಣ ರಹಿತ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಲಕ್ಷಣಗಳು ಕಂಡು ಬರದೇ ಹೋದಲ್ಲಿ ವೈರಸ್ ಇರುವುದು ಕಂಡು ಬರುವುದಿಲ್ಲ. ಹೀಗಾಗಿ ವೈರಸ್ ಪೀಡಿತರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ. 

ಏಪ್ರಿಲ್ 17ರವರೆಗಿನ ಪ್ರಕರಣಗಳನ್ನು ಗಮನಿಸಿದರೆ, 192 ಮಂದಿಯಲ್ಲಿ ಲಕ್ಷಣ ರಹಿತ ವೈರಸ್ ಪತ್ತೆಯಾಗಿದೆ. ಮೈಸೂರು, ಕಲಬುರಗಿ, ಚಿಕ್ಕಬಳ್ಳಾಪುರ ಹಾಗೂ ಬೀದರ್ ನಲ್ಲಿ ಲಕ್ಷಣರಹಿತ ರೋಗಿಗಳು ಪತ್ತೆಯಾಗಿದ್ದಾರೆ. 

ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶದ ಡಾ.ಸಿ.ನಾಗರಾಜ್ ಅವರು ಮಾತನಾಡಿ, ಲಕ್ಷಣರಹಿತ ಎಂದರೆ, ಸೋಂಕಿತ ವ್ಯಕ್ತಿಯಲ್ಲಿ ದೇಹದ ನೋವು, ದೇಹ ದೌರ್ಬಲ್ಯ ಹೊಂದಿರುವುದು, ತಲೆನೋವು ಇರುವ ಲಕ್ಷಣಗಳಷ್ಟೇ ಕಂಡು ಬರುತ್ತದೆ. ಹೀಗಾಗಿ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ವ್ಯಕ್ತಿಯಲ್ಲಿ ಉಸಿರಾಟ ಸಮಸ್ಯೆ, ಕೆಮ್ಮು, ಶೀತ, ನೆಗಡಿ, ಗಂಟಲು ನೋಡವು ಹಾಗೂ ಜ್ವರದಂತಹ ಲಕ್ಷಣಗಳು ಕಂಡು ಬರುವುದಿಲ್ಲ ಎಂದು ಹೇಳಿದ್ದಾರೆ. 

ಲಕ್ಷಣರಹಿತಕ್ಕೆ ವಯಸ್ಸು ಕೂಡ ಕಾರಣವಾಗಬಹುದು
ಲಕ್ಷಣ ರಹಿತಕ್ಕೆ ವಯಸ್ಸು ಕೂಡ ಕಾರಣವಾಗಿರುತ್ತದೆ. ವೈರಸ್ ಹೆಚ್ಚಾಗಿರುವವರಲ್ಲಿ ಲಕ್ಷಣಗಳು ಹೆಚ್ಚಾಗಿಯ ಕಂಡು ಬರುತ್ತದೆ. ಬಿಪಿ, ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆ ಇರುವವರಲ್ಲಿ ಹೆಚ್ಚಾಗಿ ಲಕ್ಷಣಗಳು ಕಂಡು ಬರುತ್ತೆದ ಎಂದು ಡಾ.ನಾಗರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com