ಗಂಗಾವತಿ: ಇಲ್ಲಿನ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.
ಹಾಸ್ಯ ಸಾಹಿತಿ ಬೀಚಿ ಬಿ. ಪ್ರಾಣೇಶ ಅವರ ನಿವಾಸ ಸಮೀಪ ಇರುವ ಉದ್ಯಮಿ ಗುಪ್ತ ಎಂಬುವವರ ಮನೆ ಸಮೀಪ ಈ ಘಟನೆ ನಡೆದಿದ್ದು, ಅಪರಿಚಿತರು ನೂರು ರೂಪಾಯಿ ಮುಖ ಬೆಲೆಯ ಒಟ್ಟು ಐದು ನೋಟುಗಳನ್ನು ಎಸೆದು ಹೋಗಿದ್ದಾರೆ.
ನೂರರ ನೋಟು ಕಂಡ ಜನ ಭಯಭೀತರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ನಗರ ಠಾಣೆಯ ಪಿಎಸ್ಐ ವೆಂಕಟಸ್ವಾಮಿ ಪರಿಶೀಲನೆ ನಡೆಸಿದರು.
ಕೊರೋನಾದಂತ ವಿಪತ್ತಿನ ಸಂದರ್ಭದಲ್ಲಿ ಅಪರಿಚಿತರ ಇಂತಹ ಕೃತ್ಯಗಳಿಂದ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಪೊಲೀಸರು ನೋಟುಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡರು.
ವರದಿ: ಶ್ರೀನಿವಾಸ .ಎಂ.ಜೆ
Advertisement