ಕಾಸರಗೋಡಿನಿಂದ ಮಂಗಳೂರಿಗೆ ಜನ ಬರಲು ಮಾಜಿ ಪಿಎಂ ವಿರೋಧವಿಲ್ಲ: ಪಾದರಾಯನಪುರದವರು ರಾಮನಗರಕ್ಕೆ ಬರಬಾರದೇ?

ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ ಎಂದು ವಿಪಕ್ಷ ನಾಯಕರಿಗೆ ಪ್ರಶ್ನೆ ಕೇಳಿದ್ದಾರೆ.
ಸುಧಾಕರ್
ಸುಧಾಕರ್

ಬೆಂಗಳೂರು: ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ ಎಂದು ವಿಪಕ್ಷ ನಾಯಕರಿಗೆ ಪ್ರಶ್ನೆ ಕೇಳಿದ್ದಾರೆ.

ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ವಿರೋಧವಿಲ್ಲ.  ಇದಕ್ಕಾಗಿ ಪ್ರಧಾನಿಗೆ ಪತ್ರವನ್ನು ಅವರು ಬರೆದಿದ್ದರು ಎಂದು ದೇವೇಗೌಡರು ಈ ಹಿಂದೆ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಹಾಗೂ ಪ್ರಧಾನಿಗೆ ಬರೆದ ಪತ್ರಗಳನ್ನು ಹಾಕಿದ್ದಾರೆ.

ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರೋದಕ್ಕೆ ಮಾಜಿ ಪ್ರಧಾನಿಗಳಿಗೆ  ವಿರೋದವಿಲ್ಲ. ಇದಕ್ಕೆ  ಪ್ರಧಾನಿಯವರಿಗೆ ಪತ್ರ ಬರೆದವರು, ಇಂದು ಪಾದರಾಯನಪುರದ ಬಾಂಧವರು ರಾಮನಗರಕ್ಕೆ ಬರಬೇಡಿ ಎಂದು ಹೇಳುವುದು ಎಷ್ಟು ಸರಿ? ರಾಜ್ಯ ಅಂದರೆ ಕೇವಲ ರಾಮನಗರ ಜಿಲ್ಲೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com