ಮೈಸೂರು: ಆನೆಯೊಂದರ ದಾಳಿಯಿಂದ ಮೃತಪಟ್ಟ ಪಾಲಕ ಹರೀಶ್ ಅವರ ಹತ್ತಿರದ ಸಂಬಂಧಿಗಳಿಗೆ ಮೈಸೂರು ಮೃಗಾಲಯ ಶನಿವಾರ 10 ಲಕ್ಷ ರೂ ಪರಿಹಾರವನ್ನು ಪ್ರಕಟಿಸಿದೆ.
‘ಇದೊಂದು ದುರದೃಷ್ಟಕರ ಘಟನೆ. ಮೃಗಾಲಯ ದಕ್ಷ ಪಾಲಕನೊಬ್ಬನನ್ನು ಕಳೆದುಕೊಂಡಿದೆ. ದಾಳಿ ನಡೆಸಿರುವ ಆನೆ ಹೇಳಿದ ಮಾತು ಕೇಳುತ್ತಿತ್ತು . ಪಾಲಕನ ಆಜ್ಞೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿತ್ತು. ಆದರೆ, ದಾಳಿ ನಡೆಸಿರುವುದು ದಿಗ್ರ್ಭಾಂತಿಯನ್ನುಂಟುಮಾಡಿದೆ.’ ಎಂದು ಮೃಗಾಲಯ ಇಂದು ಸಂಜೆ ಇಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮೃಗಾಲಯದ 39 ವರ್ಷದ ಪಾಲಕ ಹರೀಶ್ ಅವರು ಶುಕ್ರವಾರ ಸಂಜೆ ಅಪ್ರಚೋದಿತ ದಾಳಿಯಲ್ಲಿ ಅವರೇ ಆರೈಕೆ ಮಾಡುತ್ತಿದ್ದ ಆನೆ ತುಳಿತದಿಂದ ಸಾವನ್ನಪ್ಪಿದ್ದರು
Advertisement