ಮಂಡ್ಯ,: ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ತಾಯಿ, ಮಗ ಆತ್ಮಹತ್ಯಗೆ ಯತ್ನಿಸಿರುವ ಘಟನೆ ಶ್ರೀರಂಗಪಟ್ಟಣದ ಲ್ಲಿಂದು ಕಾವೇರಿ ಸೇತುವೆ ಬಳಿ ನಡೆದಿದೆ.
ಪಾಂಡವಪುರ ತಾಲೂಕಿನ ಲಕ್ಷ್ಮಿ ಸಾಗರದ ಮಹಿಳೆ ಅಪೂರ್ವ(24 ) ತನ್ನ ಪುತ್ರಿ ಕೀರ್ತನಾ (2) ಜೊತೆಗೆ ನದಿಗೆ ಹಾರಿದವರೆಂದು ಗುರ್ತಿಸಲಾಗಿದೆ.
ಮಹಿಳೆಯು ಮಗು ಕಿರ್ತನಾ ಜೊತೆಗೆ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಅಪೂರ್ವಳನ್ನ ರಕ್ಷಣೆ ಮಾಡಿದ್ದಾರೆ. ಸುಮಾರು 2 ಕಿ.ಮೀ ದೂರ ನದಿಯಲ್ಲಿ ಕೊಚ್ಚಿ ಹೋಗಿದ್ದ ಅಪೂರ್ವಳನ್ನ ಗಂಜಾಮ್ ಕರಿಘಟ್ಟ ಸೇತುವೆ ಬಳಿ ಹಗ್ಗ ಹಾಕಿ ರಕ್ಷಣೆ ಮಾಡಿದ್ದಾರೆ.
ಮಗು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಮಗುವಿನ ಶವಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
-ನಾಗಯ್ಯ
Advertisement