ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ:, ತಾಯಿ ಬಚಾವ್,ಮಗು ನೀರು ಪಾಲು

ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ತಾಯಿ, ಮಗ ಆತ್ಮಹತ್ಯಗೆ ಯತ್ನಿಸಿರುವ ಘಟನೆ ಶ್ರೀರಂಗಪಟ್ಟಣದ ಲ್ಲಿಂದು ಕಾವೇರಿ ಸೇತುವೆ ಬಳಿ ನಡೆದಿದೆ.
ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ:, ತಾಯಿ ಬಚಾವ್,ಮಗು ನೀರು ಪಾಲು

ಮಂಡ್ಯ,:  ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ತಾಯಿ, ಮಗ ಆತ್ಮಹತ್ಯಗೆ ಯತ್ನಿಸಿರುವ ಘಟನೆ ಶ್ರೀರಂಗಪಟ್ಟಣದ ಲ್ಲಿಂದು ಕಾವೇರಿ ಸೇತುವೆ ಬಳಿ ನಡೆದಿದೆ.

ಪಾಂಡವಪುರ ತಾಲೂಕಿನ ಲಕ್ಷ್ಮಿ ಸಾಗರದ ಮಹಿಳೆ ಅಪೂರ್ವ(24 ) ತನ್ನ   ಪುತ್ರಿ  ಕೀರ್ತನಾ (2) ಜೊತೆಗೆ ನದಿಗೆ ಹಾರಿದವರೆಂದು ಗುರ್ತಿಸಲಾಗಿದೆ.


ಮಹಿಳೆಯು ಮಗು ಕಿರ್ತನಾ ಜೊತೆಗೆ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ನೀರಿನಲ್ಲಿ ಕೊಚ್ಚಿ  ಹೋಗ್ತಿದ್ದ ಅಪೂರ್ವಳನ್ನ ರಕ್ಷಣೆ ಮಾಡಿದ್ದಾರೆ.  ಸುಮಾರು 2  ಕಿ.ಮೀ ದೂರ  ನದಿಯಲ್ಲಿ ಕೊಚ್ಚಿ ಹೋಗಿದ್ದ ಅಪೂರ್ವಳನ್ನ  ಗಂಜಾಮ್ ಕರಿಘಟ್ಟ ಸೇತುವೆ ಬಳಿ ಹಗ್ಗ ಹಾಕಿ ರಕ್ಷಣೆ ಮಾಡಿದ್ದಾರೆ.

ಮಗು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಮಗುವಿನ ಶವಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

-ನಾಗಯ್ಯ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com