ಬೆಂಗಳೂರು: ನಗರದ ಡಿಜೆಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಡಿಜೆ ಠಾಣೆ ಎದುರು ಬಂಧಿತರ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದಾರೆ.
50ಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡು ಬಂಧಿತರ ಭಾವ ಚಿತ್ರ ಹಿಡಿದು ಇವರೆಲ್ಲರೂ ಅಮಾಯಕರು, ಅವರನ್ನು ದಯವಿಟ್ಟು ಬಿಟ್ಟು ಬಿಡಿ ಎಂದು ಪೊಲೀಸರಲ್ಲಿ ಮನವಿ ಮಾಡುವ ಮೂಲಕ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಹಿಳೆ ಓರ್ವಳು ಠಾಣೆಯ ಎದುರೇ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆಯಿತು. ತಕ್ಷಣವೇ ಜೊತೆಗಿದ್ದವರು ಅವರನ್ನು ನೀರು ಕುಡಿಸಿ ಸ್ವಾಂತನ ಹೇಳುವ ದೃಶ್ಯವು ಕಂಡು ಬಂತು.
Advertisement