ಬೆಂಗಳೂರು: ಎಟಿಎಂನಲ್ಲಿದ್ದ 28 ಲಕ್ಷ ಹಣ ದರೋಡೆ ಪ್ರಕರಣ ಭೇದಿಸಿದ ಪೊಲೀಸರು, ಕುಖ್ಯಾತ 3 ಕಳ್ಳರ ಬಂಧನ

ಬ್ಯಾಂಕ್ ಎಟಿಎಂ ಮಷಿನ್ ಒಡೆದು ಹಣ ದೋಚಿದ್ದ ಮೂವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಳ್ಳರು
ಬಂಧಿತ ಕಳ್ಳರು

ಬೆಂಗಳೂರು: ಬ್ಯಾಂಕ್ ಎಟಿಎಂ ಮಷಿನ್ ಒಡೆದು ಹಣ ದೋಚಿದ್ದ ಮೂವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಸಮರ್ ಜೋತ್ ಸಿಂಗ್(33), ಎವಿ ಜಾಫರ್(30), ಯಾಹ್ಯಾ(27) ಬಂಧಿತ ಆರೋಪಿಗಳು.

ಬಂಧಿತರಿಂದ 17,34,586  ನಗದು,  ಕಳ್ಳತನ ಹಣದಲ್ಲಿ ಖರೀದಿ ಮಾಡಿದ್ದ 1-ಸ್ಕೋಡಾ ಕಾರು, 1-ಹೊಂಡಾ ಆಕ್ಟೀವಾ ಬೈಕ್, 1-ಐ  ಫೋನ್, ಐಶಾರಾಮಿ ಬಟ್ಟೆಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 1-ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್, 1-ಹೊಂಡಾ ಆಕ್ಟೀವಾ ಬೈಕ್ ವನ್ನು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 10ರ ಮಧ್ಯರಾತ್ರಿ ಜಾಲಹಳ್ಳಿ ಸಮೀಪ ಎಂಇಎಸ್ ರಸ್ತೆಯ ಕೆನರಾ ಬ್ಯಾಂಕ್ ನ ಎಟಿಎಂ ಮಿಷನ್ ಅನ್ನು ಗ್ಯಾಸ್ ಕಟ್ಟರ್ ನಿಂದ ಕತ್ತರಿಸಿ 27 ಲಕ್ಷ 82 ಸಾವಿರ ರುಪಾಯಿಯನ್ನು ಕಳ್ಳತನ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com