ತುಮಕೂರು: ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ತುಮಕೂರು ತಾಲ್ಲೂಕಿನ ಅಜ್ಜಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ನಡೆದಿದೆ.
ಗುಬ್ಬಿ ತಾಲ್ಲೂಕಿನ ಗೌರಿಪುರದ ವಿಕಾಸ್ (24) ಎಡಗಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಡೇಟು ತಿಂದ ಆರೋಪಿ ರೌಡಿಶೀಟರ್ ಮಂಜನಾಥ್ (32) ಅಲಿಯಾಸ್ ಉಚ್ಚೆಮಂಜನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು.
ತುಮಕೂರು ತಾಲೂಕು ಅಜ್ಜಪ್ಪನಹಳ್ಲಿಯ ಸಮುದಾಯ ಭವನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗುಬ್ಬಿ ತಾಲೂಕಿನ ಗೌರಿಪುರದ ವಿಕಾಸ್ ಅಲಿಯಾಸ್ RX ವಿಕ್ಕಿ (24)ಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಆತ ಮುಂದಾದಾಗ ತಿಲಕ್ ಪಾರ್ಕ್ ಠಾಣೆ ಪಿಎಸ್ ಐ ನವೀನ್ ಗುಂಡು ಹಾರಿಸಿದ್ದಾರೆ.
ಆರೋಪಿ ವಿಕ್ಕಿ ಹಾಗೂ ಎಡಕೈ ತೋಳಿಗೆ ಗಾಯಗೊಂಡಿರುವ ಎಎಸ್_ಐ ಪರಮೇಶ್ವರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement