ಬಿಬಿಎಂಪಿ ಬಜೆಟ್: ಸಲಹೆ ಕೇಳಿದ ಆಯುಕ್ತರು; ಉತ್ತಮ ಶೌಚಾಲಯ, ಪಾದಾಚಾರಿ ಮಾರ್ಗಕ್ಕೆ ನಾಗರಿಕರ ಬೇಡಿಕೆ

ಬಿಬಿಎಂಪಿ ಬಜೆಟ್ 2021-22ರ ಸಿದ್ಧತೆಯಲ್ಲಿ ತೊಡಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸಾರ್ವಜನಿಕರ ಭಾಗವಹಿಸುವಿಕೆ ಅಭಿಯಾನ ಆರಂಭಿಸಿದ್ದು, #ಮೈಸಿಟಿಮೈಬಡ್ಜೆಟ್ ಅನ್ನು ಪ್ರಾರಂಭಿಸಿದ್ದಾರೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ಬಜೆಟ್ 2021-22ರ ಸಿದ್ಧತೆಯಲ್ಲಿ ತೊಡಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸಾರ್ವಜನಿಕರ ಭಾಗವಹಿಸುವಿಕೆ ಅಭಿಯಾನ ಆರಂಭಿಸಿದ್ದು, #ಮೈಸಿಟಿಮೈಬಡ್ಜೆಟ್ ಅನ್ನು ಪ್ರಾರಂಭಿಸಿದ್ದಾರೆ.

ಅದರಂತೆ ಬಜೆಟ್ ಸಿದ್ಧತೆಯಲ್ಲಿ ನಾಗರೀಕರೂ ಕೂಡ ಪಾಲ್ಗೊಳ್ಳುವುದು, ನಗರಕ್ಕೆ ಏನು ಬೇಕು.. ಏನು ಬೇಡ ಎಂಬಿತ್ಯಾದಿ ಅಂಶಗಳ ಕುರಿತು ಅಧಿಕಾರಿಗಳ ಗಮನ ಸೆಳೆಯುವುದು ಈ ಅಭಿಯಾನ ಮುಖ್ಯ ಉದ್ದೇಶವಾಗಿದೆ. ಪಾಲಿಕೆ ಆಯುಕ್ತ ಎನ್ ಮಂಜುನಾಥ ಪ್ರಸಾದ್ ಅವರು ಬಜೆಟ್ ಅನ್ನು ಹೇಗೆ  ಸುಧಾರಿಸಬಹುದು ಮತ್ತು ಯಾವುದನ್ನು ಸೇರಿಸಬೇಕು ಮತ್ತು ಯಾವುದನ್ನು ಕೈಬಿಡಬೇಕು ಎಂಬುದರ ಕುರಿತು ನಾಗರಿಕರು ಮತ್ತು ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದರು. ಇದೀಗ  ಅಭಿಯಾನಕ್ಕೆ ಪ್ರತಿಕ್ರಿಯೆಗಳು ಬಂದಿದ್ದು, 'ಅನೇಕರು ಉತ್ತಮ ಸಾರ್ವಜನಿಕ ಶೌಚಾಲಯ ಮತ್ತು ಫುಟ್‌ಪಾತ್‌ಗಳ  ನಿರ್ಮಾಣವನ್ನು ಕೋರಿದ್ದಾರೆ. ಈ ಕುರಿತ ವಿವರಗಳನ್ನು ಒದಗಿಸಲು ನಾವು ಅವರನ್ನು ಕೇಳಿದ್ದೇವೆ ಮತ್ತು ಅದನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದರು,

2017-18ರಲ್ಲಿ, ನಾವು 22,000 ಸಲಹೆಗಳನ್ನು ಸ್ವೀಕರಿಸಿದ್ದೇವೆ. ಈ ಸಲಹೆಗಳು ಬಜೆಟ್ ರೂಪಿಸಲು ನಮಗೆ ಸಾಕಷ್ಟು ಸಹಾಯ ಮಾಡಿತು. ಈ ವರ್ಷ, ಬಜೆಟ್ ಸಿದ್ಧಪಡಿಸುವಾಗ, ಸಾರ್ವಜನಿಕ ಶೌಚಾಲಯಗಳು ಮತ್ತು ಪಾದಚಾರಿ ಸ್ನೇಹಿ ಫುಟ್‌ಪಾತ್‌ಗಳ ಬಗ್ಗೆ ವಿಶೇಷ ಗಮನ ಹರಿಸಲು ನಾವು  ಬಯಸುತ್ತೇವೆ. ನಮ್ಮಲ್ಲಿರುವ ನಿಧಿಯೊಂದಿಗೆ ನಾವು ಒಟ್ಟಾಗಿ ಕೆಲಸ ಮಾಡೋಣ ಮತ್ತು ಪ್ರತಿಯೊಬ್ಬ ನಾಗರಿಕರು ನಮ್ಮ ನಗರ ಮತ್ತು ಅದರ ಸುಂದರವಾದ ಹವಾಮಾನವನ್ನು ಆನಂದಿಸಲು ಎಲ್ಲಾ ರಸ್ತೆಗಳನ್ನು ಬಳಸಬಹುದಾದ ಮತ್ತು ಸರಿಪಡಿಸುವಂತಹ ಶೌಚಾಲಯಗಳನ್ನು ನಿರ್ಮಿಸೋಣ ಎಂದು ಹೇಳಿದ್ದಾರೆ.

ಜನಾಗ್ರಹ ನಾಗರಿಕ ಭಾಗವಹಿಸುವಿಕೆಯ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಅವರು 'ಹಳದಿ ಕಲೆಗಳು' (ಸಾರ್ವಜನಿಕ ಮೂತ್ರ ವಿಸರ್ಜನೆ) ಕಲೆಗಳು ಅಕ್ಷರಶಃ ಬೆಂಗಳೂರಿನ ಮೇಲೆ ಒಂದು ಕಳಂಕವಾಗಿದೆ. ಜನರು ಮೂತ್ರ ವಿಸರ್ಜನೆ ಜನರ ಚಳುವಳಿಯಾಗುವವರೆಗೆ ಅದನ್ನು ನಿಲ್ಲಿಸಲಾಗುವುದಿಲ್ಲ. ನಾವು ಎಲ್ಲಾ  ನಾಗರಿಕ ಸಂಸ್ಥೆಗಳನ್ನು ಇದರ ಭಾಗವಾಗಿರಲು ಆಹ್ವಾನಿಸುತ್ತೇವೆ ಮತ್ತು ಈ ವರ್ಷ ನಮ್ಮ ಫುಟ್‌ಪಾತ್‌ಗಳನ್ನು ಸಹ ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.

“ಬೆಂಗಳೂರಿನಲ್ಲಿ ಹಲವಾರು ಮೂಲಸೌಕರ್ಯ ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಬಿಬಿಎಂಪಿ ಮತ್ತು ಸಾರ್ವಜನಿಕರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಜನಾಗ್ರಹಾ ಸಿವಿಕ್ ಭಾಗವಹಿಸುವಿಕೆಯ ಮುಖ್ಯಸ್ಥೆ ಸಪ್ನಾ ಕರೀಮ್ ಹೇಳಿದರು. ಈ  ಅಭಿಯಾನವು ಒಂದು ತಿಂಗಳ ಕಾಲ ಸಕ್ರಿಯವಾಗಿರಲಿದ್ದು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಸುಧಾರಿಸಲು ಮತ್ತು ಫುಟ್‌ಪಾತ್‌ಗಳನ್ನು ಸರಿಪಡಿಸಲು ಗಮನಹರಿಸುತ್ತದೆ. ನಾಗರಿಕರಾದ ನಾವು ಎಲ್ಲೋ ಸ್ಪಾಟ್ ಗಳನ್ನು ಗುರಿತಿಸಿ ನಿಗದತಿ ಪ್ರದೇಶಶದಲ್ಲೇ ಮೂತ್ರ ವಿಸರ್ಜನೆ ಮಾಡಬೇಕು. ಬಳಸಲಾಗದ  ಸ್ಥಿತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳು ಮತ್ತು ಕೆಟ್ಟ ಫುಟ್‌ಪಾತ್‌ಗಳನ್ನು ಗುರುತಿಸಿ ಅವಗಳನ್ನು ಪಾಲಿಕೆ ಗಮನಕ್ಕೆ ತರುವ ಮೂಲಕ ಭಾಗವಹಿಸಬಹುದು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com