ಬೆಚ್ಚಿಬಿದ್ದ ಮಂಗಳೂರು: ಹಾಡ ಹಗಲೇ ಹೆಡ್ ಕಾನ್‌ಸ್ಟೆಬಲ್ ಮೇಲೆ ತಲ್ವಾರ್ ದಾಳಿ

ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಮೇಲೆ ದುಷ್ಕರ್ಮಿ ಹಾಡಹಗಲೇ ತಲ್ವಾರ್, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೆಚ್ಚಿಬಿದ್ದ ಮಂಗಳೂರು: ಹಾಡ ಹಗಲೇ ಹೆಡ್ ಕಾನ್‌ಸ್ಟೆಬಲ್ ಮೇಲೆ ತಲ್ವಾರ್ ದಾಳಿ

ಮಂಗಳೂರು: ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಮೇಲೆ ದುಷ್ಕರ್ಮಿ ಹಾಡಹಗಲೇ ತಲ್ವಾರ್, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ನ್ಯೂ ಚಿತ್ರ ಟಾಕೀಸ್ ಎದುರು ನಡೆದ ಘಟನೆಯಲ್ಲಿ ಬಂದರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಣೇಶ್ ಕಾಮತ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಗಣೇಶ್ ಕಾಮತ್ ಹಾಗೂ ಇನ್ನಿತರೆ ಇಬ್ಬರು ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಣೇಶ ಕಾಮತ್ ಮೇಲೆ ತಲ್ವಾರ್ ಬೀಸಿದ್ದಾನೆ, ಆ ವೇಳೆ ಕೈಗೆ ಗಾಯವಾದ ಗಣೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಹೆಡ್ ಕಾನ್‌ಸ್ಟೆಬಲ್‌ನೊಂದಿಗಿನ ಹಳೆ ದ್ವೇಷವು ದಾಳಿಯ ಹಿಂದಿನ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ,  ದುಶ್ಕರ್ಮಿಯ ಸುಳಿವಿಗಾಗಿ ಪೋಲೀಸರು ಶೋಧ ನಡೆಸಿದ್ದಾರೆ. ಆತ ಸಹ ಸ್ಥಳೀಯ ನಿವಾಸಿ ಎಂದು ಶಂಕೆ ಇದೆ.

ಮೂರು ವರ್ಷಗಳ ಹಿಂದೆ, ಏಪ್ರಿಲ್ 5, 2017 ರಂದು ನಗರದ ಉರ್ವ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಐತಪ್ಪ ಅವರ ಮೇಲೆ ನಗರದ ಲೇಡಿಹಿಲ್ ಸರ್ಕಲ್ ಬಳಿ ಮುಂಜಾನೆ ಇದೇ ಬಗೆಯಲ್ಲಿ ಹಲ್ಲೆ ನಡೆಸಲಾಗಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ಹಲ್ಲೆಕೋರರು ಐತಪ್ಪ ಅವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಪರಾರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com