ರಾಯಚೂರು: ಚುನಾವಣೆ ವೈಷಮ್ಯ, ಯುವಕನ ಬರ್ಬರ ಕೊಲೆ

ಚುನಾವಣೆ ವೈಷಮ್ಯದಿಂದ ಯುವಕನನ್ನು ಬರ್ಬರ ಕೊಲೆ ಮಾಡಿರುವ ಘಟನೆ ರಾಯಚೂರಿನ ಸಾವಂತಗೇರಿ ಸಮೀಪ ನಡೆದಿದೆ.
ರಾಯಚೂರು: ಚುನಾವಣೆ ವೈಷಮ್ಯ, ಯುವಕನ ಬರ್ಬರ ಕೊಲೆ

ರಾಯಚೂರು: ಚುನಾವಣೆ ವೈಷಮ್ಯದಿಂದ ಯುವಕನನ್ನು ಬರ್ಬರ ಕೊಲೆ ಮಾಡಿರುವ ಘಟನೆ ರಾಯಚೂರಿನ ಸಾವಂತಗೇರಿ ಸಮೀಪ ನಡೆದಿದೆ.

ಮಾನ್ವಿಯ ಗವಿಗಟ್ ಗ್ರಾಮದ ನಿವಾಸಿ ಅಮರೇಶ್ (28) ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.. ಇದಲ್ಲದೆ ಆತನ ಮೂವರು ಸ್ನೇಹಿತರ ಮೇಲೆ ಸಹ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಘಟನೆಯಲ್ಲಿ ಮಲ್ಲಯ, ಮಹಾದೇವ, ರಮೇಶ್ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮರೇಶ್ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಮಲ್ಲಯ್ಯನಿಗೆ ಸೂಚಕನಾಗಿದ್ದನೆಂಬ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com