ಬೆಂಗಳೂರು: ಬಾಸ್ ಮತ್ತು ಯೂನೈಟೆಡ್ ವೇ ಆಪ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ ನಿರ್ಮಿಸಲಾಗಿರುವ 209 ಮಳೆ ನೀರು ಕೊಯ್ಲು ಹೊಂಡಗಳನ್ನು ತೋಟಗಾರಿಕೆ ಇಲಾಖೆ ಗುರುವಾರ ಉದ್ಘಾಟಿಸಿತು.
ಈ 209 ಮಳೆ ನೀರು ಕೊಯ್ಲು ಹೊಂಡಗಳ ಪೈಕಿಯಲ್ಲಿ 124ನ್ನು ಬಾಸ್ ಕಂಪನಿ ಸಿಎಸ್ ಆರ್ ಚಟುವಟಿಕೆಯಡಿ ಪ್ರಯೋಜಿಸಿದ್ದರೆ , 85 ಹೊಂಡಗಳನ್ನು ತೋಟಗಾರಿಕೆ ಇಲಾಖೆ ಅನುದಾನ ಒದಗಿಸಿದೆ. ಇನ್ನೂ 50 ಹೂಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಹೆಚ್ಚಿನ ಮರಗಳಿದ್ದರೂ ಸಹ ನಾಗರಿಕ ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ಲಾಲ್ ಬಾಗ್ ಮಾತ್ರವಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತೀವ್ರ ಮಟ್ಟದಲ್ಲಿ ಕುಸಿದಿದ್ದು, ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸಸ್ಯೋದ್ಯಾನಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಲಾಲ್ ಬಾಗ್ ನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಲಾಲ್ ಬಾಗ್ ಉಪ ನಿರ್ದೇಶಕಿ ಜಿ. ಕುಸುಮಾ ತಿಳಿಸಿದ್ದಾರೆ.
Advertisement