ಮಧುಗಿರಿ: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಹೂತು ಹಾಕಿರುವ ಘಟನೆಯೊಂದು ತುಮಕೂರಿನ ಹೊಸ ಇಟಕಲೋಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗಾಯಿತ್ರಿ (16) ಮೃತಪಟ್ಟ ಬಾಲಕಿಯಾಗಿದ್ದಾಳೆ. ಘಟನೆ ಬಳಿಕ ಆರೋಪಿ ನರಸಿಂಹಮೂರ್ತಿ ತಲೆಮರೆಸಿಕೊಂಡಿದ್ದಾನೆ.
ಗ್ರಾಮದ ಸಹೋದರ ಸಂಬಂಧಿಯಾಗಿದ್ದ ನರಸಿಂಹಯ್ಯ ತನ್ನ ಪುತ್ರ ನರಸಿಂಹಮೂರ್ತಿಗೆ ಮೃತ ಗಾಯಿತ್ರಿಯೊಡನೆ ವಿವಾಹ ಮಾಡಲು ಬಾಲಕಿಯ ತಂದೆಗೆ ಪ್ರಸ್ತಾಪ ಕಳುಹಿಸಿದ್ದರು. ಆದರೆ, ಅದನ್ನು ಬಾಲಕಿಯ ತಂದೆ ಹನುಮಂತರಾಯಪ್ಪ ನಿರಾಕರಿಸಿದ್ದನು. ಆದರೂ ಕಳೆದ ವರ್ಷ ಎಸ್ಎಸ್ಎಲ್'ಸಿ ಪರೀಕ್ಷೆ ಬರೆದ ನಂತರ ಬಲವಂತದಿಂದ ಮದುವೆ ಮಾಡಿಕೊಳ್ಳಲಾಗಿದ್ದು, ಈ ಮದುವೆಗೆ ಬಾಲಕಿಯ ಕುಟುಂಬಸ್ಥರು ಯಾರೂ ಬಂದಿರಲಿಲ್ಲ.
ಮದುವೆಯಾಗಿ 9 ತಿಂಗಳು ಕಳೆದಿದ್ದು, ಮಕ್ಕಳ ರಕ್ಷಣಾ ಇಲಾಖೆಗೆ ಯಾರಿಂದಲೂ ಯಾವುದೇ ದೂರು ದಾಖಲಿಸಿರಲಿಲ್ಲ.
ಪ್ರಸ್ತುತ 16 ದಿನಗಳಿಂದ ನನ್ನ ಮಗಳು ಕಾಣಿಸುತ್ತಿಲ್ಲವೆಂದು ಬಾಲಕಿಯ ತಂದೆ ಮಿಡಿಗೇಶಿ ಠಾಣೆಗೆ ದೂರು ನೀಡಿದ್ದರು. ಆದರೆ, ಯಾವುದೇ ಸುಳಿಸುವ ಸಿಕ್ಕರಲಿಲ್ಲ. ಆದರೆ, ಮೃತ ಬಾಲಕಿಯ ಅಕ್ಕ ಶ್ವೇತಾ ನರಸಿಂಹಯ್ಯನ ಮನೆಯನ್ನು ಪರಿಶೀಲನೆ ನಡೆಸುವಾದ ಮನೆಯ ಮಧ್ಯಭಾಗ ಕಂದಕ ಸೃಷ್ಟಿಸಿ ಕಡಪಾ ಕಲ್ಲಿನಿಂದ ಮುಚ್ಚಿದಂತೆ ಕಂಡು ಬಂದಿದೆ. ಕೂಡಲೇ ಅನುಮಾನಗೊಂಡ ಶ್ವೇತ ತಂದೆಗೆ ತಿಳಿಸಿ ಮತ್ತೊಮ್ಮೆ ದೂರು ನೀಡಿದ್ದರು.
ಈ ದೂರು ಆಧರಿಸಿ ಬುಧವಾರ ಉಪ ವಿಭಾಗಾಧಿಕಾರಿ, ಸಿಡಿಪಿಒ, ಸಿಪಿಐ ನೇತೃತ್ವದಲ್ಲಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿ ಮಧ್ಯಭಾಗದಲ್ಲಿ ಗುಂಡಿಯಲ್ಲಿ ಹುತುಹಾಕಲಾಗಿತ್ತು. ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಿದ್ದಾರೆ.
ಆರೋಪಿ ನರಸಿಂಹಯ್ಯ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಕೆಲ ದಿನಗಳಿಂದ ಪತ್ನಿ ಗಾಯಿತ್ರಿ ಜೊತೆಗೆ ಆಸ್ತಿ ವಿಚಾರ ಕುರಿತು ಜಗಳ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
Advertisement