ಸಿರಾ ಬಳಿ ರಸ್ತೆ ಅಪಘಾತ: ಮೂವರು ಸಾವು

ಸಿರಾ ತಾಲ್ಲೂಕಿನ ಗಾಂಧಿನಗರ ಕ್ರಾಸ್‌ನಲ್ಲಿ ಟ್ರಕ್ ವೊಂದು ನಿಂತಿದ್ದ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಸಿರಾ ತಾಲ್ಲೂಕಿನ ಗಾಂಧಿನಗರ ಕ್ರಾಸ್‌ನಲ್ಲಿ ಟ್ರಕ್ ವೊಂದು ನಿಂತಿದ್ದ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಟ್ರಕ್ ಚಾಲಕ ಶ್ರೀನಿವಾಸ್ (35), ಕ್ಲೀನರ್ ಮಹೇಶ್ (38) ಮತ್ತು ಮತ್ತೊಂದು ಟ್ರಕ್ ಚಾಲಕ ನಿಂಗರಾಜು (40) ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿರಾ ಕಡೆಯಿಂದ ತಮಿಳುನಾಡಿಗೆ ಕ್ಯಾಂಟರ್ ನಲ್ಲಿ ಭತ್ತ ಕಟಾವು ಮಾಡಯವ ಯಂತ್ರವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಕ್ಯಾಂಟರ್ ಹಿಂಬದಿ ಚಕ್ರ ಪಂಚರ್ ಆಗಿದೆ. ಚಕ್ರ ಬದಲಿಸಲು ಚಾಲಕ ಮುಂದಾಗಿದ್ದಾರೆ. ಈ ವೇಳೆ ಬಳ್ಳಾರಿಯಿಂದ ಬೆಂಗಳೂರಿಗೆ  ಮೊಟ್ಟೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಕ್ಯಾಂಟರ್  ಗೆ ಡಿಕ್ಕಿಯಾಗಿದೆ.

ಕ್ಯಾಂಟರ್ ಲಾರಿಯಲ್ಲಿದ್ದ ಭತ್ತ ಕಟಾವು ಮಾಡುವ ಯಂತ್ರದ ಆಪರೇಟರ್  ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹೊಳೆಅನ್ನೇರಿ ಗ್ರಾಮದ ನಿಂಗರಾಜು (22)  ಹಾಗೂ ದಾವಣಗೆರೆ ತಾಲ್ಲೂಕಿನ ಸ್ಯಾಗಳಿ ಗ್ರಾಮದ ಶ್ರೀನಿವಾಸ್ (22) ಮತ್ತು ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಹೇಶ್ (25)   ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com