ರಾಯಚೂರು: ಮಹಿಳೆಯೊಬ್ಬರನ್ನು ಆಕೆಯ ಸಂಬಂಧಿಯೇ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮುದಗಲ್ ಪೇಟೆಯ ವೆಂಕಟರಾಯನಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದ್ದು ಮೃತಳನ್ನು ನೇತ್ರಾವತಿ (33) ಎಂದು ಗುರುತಿಸಲಾಗಿದೆ.
ನೇತ್ರಾವತಿಯ ಸಂಬಂಧಿಯಾದ ಶಿವರಾಜ ಎಂಬಾತನೇ ಮಹಿಳೆಯ ಹತ್ಯೆ ಮಾಡಿದ್ದು ತಿಳಿದುಬಂದಿದೆ. ಕೃತ್ಯ ನಡೆಸಿದ ಆರೋಪಿ ಸಧ್ಯ ಪರಾರಿಯಾಗಿದ್ದಾನೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಮುದಗಲ್ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿವರಾಜನಿಗಾಗಿ ಶೋಧ ನಡೆದಿದೆ.
Advertisement