ಹೊಸಪೇಟೆ: ಬೆಲೆಗೆ ಸರಿಯಾಗಿ ಪೆಟ್ರೋಲ್ ಹಾಕದೇ ವಂಚಿಸುತ್ತಿದ್ದ ಪೆಟ್ರೋಲ್ ಪಂಪ್ ಮಾಲಿಕನ ವಿರುದ್ಧ ದೂರು 

ಬೆಲೆಗೆ ಸರಿಯಾದ ಪೆಟ್ರೋಲ್ ಹಾಕದೆ ವಂಚಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿ ನಡೆಯಿತು.
ಹೊಸಪೇಟೆ: ಬೆಲೆಗೆ ಸರಿಯಾಗಿ ಪೆಟ್ರೋಲ್ ಹಾಕದೇ ವಂಚಿಸುತ್ತಿದ್ದ ಪೆಟ್ರೋಲ್ ಪಂಪ್ ಮಾಲಿಕನ ವಿರುದ್ಧ ದೂರು
ಹೊಸಪೇಟೆ: ಬೆಲೆಗೆ ಸರಿಯಾಗಿ ಪೆಟ್ರೋಲ್ ಹಾಕದೇ ವಂಚಿಸುತ್ತಿದ್ದ ಪೆಟ್ರೋಲ್ ಪಂಪ್ ಮಾಲಿಕನ ವಿರುದ್ಧ ದೂರು

ಹೊಸಪೇಟೆ: ಬೆಲೆಗೆ ಸರಿಯಾದ ಪೆಟ್ರೋಲ್ ಹಾಕದೆ ವಂಚಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿ ನಡೆಯಿತು.

ನಗರದ ಶಂಕರ್ ಪೆಟ್ರೋಲ್ ಸರ್ವೀಸ್ ಸೆಂಟರ್ ನಲ್ಲಿ ಪಾಟ್ರೋಲ್ ಹಾಕಿಸಿಕೊಳ್ಳಲು ಬಂದ ಗ್ರಾಹಕನಿಂದ 100 ರೂಪಾಯಿ ಪಡೆದ ಸಿಬ್ಬಂದಿ 68 ರೂಪಾಯಿ ಪೆಟ್ರೋಲ್ ಹಾಕಿ ವಂಚಿಸಲು ನೋಡಿದ್ದಾನೆ. ಇದನ್ನ ಗಮನಿಸಿದ ಗ್ರಾಹಕ ಕೂಡಲೇ ಬಂಕ್ ಮಾಲಿಕ ಮತ್ತು ಮ್ಯಾನೇಜರ್ ಗಮನಕ್ಕೆ ತಂದರೂ ತಲೆ ಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಹಕರು ಕೆಲವು ನಿಮಿಷ ಪೆಟ್ರೋಲ್ ಪಂಪ್ ಬಂದ್ ಮಾಡಿ ಗಲಾಟೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿಕೊಟ್ಟ ಹೊಸಪೇಟೆ ಪಟ್ಟಣ ಪೊಲೀಸರು ಗಲಾಟೆ ನಿಯಂತ್ರಿಸಿ ಠಾಣೆಗೆ ಬಂದು ಮಾಲೀಕರ ವಿರುದ್ಧ ದೂರು ನೀಡುವಂತೆ ತಿಳಿಸಿದರು. ನಂತರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಂಚಿತ ಗ್ರಾಹಕರು ಬಂಕ್ ಮಾಲೀಕ ಮತ್ತು ಸಿಬ್ಬಂದಿಗಳ ವಿರುದ್ಧ ದೂರು ನೀಡಲು ಮುಂದಾದರು. 

ಕಳೆದ ಕೆಲವು ತಿಂಗಳಿನಿಂದ ಈ ಶಂಕರ್ ಸರ್ವೀಸ್ ಸೆಂಟರ್ ನಲ್ಲಿ ಕಳಪೆ ಗುಣ ಮಟ್ಟ ಮತ್ತು ಅಳೆಯತೆಯ ಪೆಟ್ರೋಲ್ ಹಾಕಿ ಗ್ರಾಹರನ್ನ ವಂಚಿಸಲಾಗುತ್ತೆ ಎಂದು ಆರೋಪ ಕೇಳಿ ಬರುತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com