ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ: ಬೈಕ್ ನಲ್ಲಿ ಹೋಗುತ್ತಿದ್ದ ಪೊಲೀಸ್ ಪೇದೆ ದುರ್ಮರಣ

ಕಳೆದ ರಾತ್ರಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಮುಖ್ಯಪೇದೆ ಭಕ್ತರಾಮ್ ಎಂಬವರು ಮೃತಪಟ್ಟಿದ್ದಾರೆ
ಮುಖ್ಯಪೇದೆ ಭಕ್ತರಾಮ್
ಮುಖ್ಯಪೇದೆ ಭಕ್ತರಾಮ್

ಬೆಂಗಳೂರು: ಕಳೆದ ರಾತ್ರಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಮುಖ್ಯಪೇದೆ ಭಕ್ತರಾಮ್ ಎಂಬವರು ಮೃತಪಟ್ಟಿದ್ದಾರೆ

ಭಕ್ತ ರಾಮ್ ಕಳೆದ ರಾತ್ರಿ ಯಶವಂತಪುರದ ಎಂಇಎಸ್ ರಿಂಗ್ ರಸ್ತೆಯಲ್ಲಿ ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ಲಾರಿಯೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ

 ಡಿಕ್ಕಿಯ ರಭಸಕ್ಕೆ ರಸ್ತೆ ವಿಭಜಕದಿಂದ ಎಗರಿದ ಸಿಮೆಂಟ್ ಬ್ಲಾಕೊಂದು ರಾಮ್ ಅವರಿಗೆ ಬಡಿದಿದೆ. ತಕ್ಷಣ ರಸ್ತೆಗೆ ಉರುಳಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಮೃತಪಟ್ಟಿದ್ದಾರೆ.

ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ  ಕೆಲಸ ಮಾಡುತ್ತಿದ್ದ ಭಕ್ತರಾಮ್‌ಗೆ ಇಬ್ಬರು ಮಕ್ಕಳಿದ್ದು ಮಗಳು ಬಿಎಸ್‌ಸಿ  ಓದುತ್ತಿದ್ದರೆ ಪುತ್ರ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com