ಬೆಂಗಳೂರು: ತಾಯಿಯನ್ನು ಕೊಂದು, ಸಹೋದರರನ್ನ ಕೊಲೆ ಮಾಡಲು ಯತ್ನಿಸಿದ್ದ ಸಾಫ್ಟ್ ವೇರ್ ಎಂಜಿನೀಯರ್ ಅಮೃತಾಳನ್ನು ಪೊಲೀಸರರು ಬಂಧಿಸಿದ್ದಾರೆ.
ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಅಮ್ಮನ ಕತ್ತು ಸೀಳಿ ಕೊಲೆ ಮಾಡಿ ಮಗಳು ಪರಾರಿಯಾಗಿದ್ದಳು.
ಫೆ. 2ರಂದು ಕೆ.ಆರ್. ಪುರಂನ ಮನೆಯಲ್ಲಿ ಅಮ್ಮನನ್ನು ಕೊಂದಿದ್ದ ಅಮೃತಾ ಬಳಿಕ ತನ್ನ ಮನೆಯ ಬಳಿ ಪಲ್ಸರ್ ಬೈಕ್ನಲ್ಲಿ ಬಂದಿದ್ದ ಪ್ರಿಯಕರನೊಂದಿಗೆ ತೆರಳಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಆ ಬೈಕನ್ನು ವಶಕ್ಕೆ ಪಡೆದಿದ್ದರು. ಇಂದು ಆರೋಪಿಗಳಾದ ಅಮೃತಾ ಮತ್ತು ಆಕೆಯ ಪ್ರಿಯಕರ ಶ್ರೀಧರ್ ರಾವ್ನನ್ನು ಅಂಡಮಾನ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ಕೆ.ಆರ್. ಪುರಂ ಇನ್ಸ್ಪೆಕ್ಟರ್ ಅಂಬರೀಶ್ ನೇತೃತ್ವದಲ್ಲಿ ಬಂಧಿಸಲಾಗಿದೆ.
Advertisement