ಕಲಬುರಗಿ: ಕನ್ನಡ ಭಾಷೆಯ ಆರಾಧನೆ ಸಾಹಿತ್ಯ ಸಮ್ಮೇಳನದ ಧ್ಯೇಯ. ಪರಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಮನೆ ಮನಗಳಲ್ಲಿ ಬಳಸಬೇಕು. ಕನ್ನಡಲ್ಲೇ ವ್ಯವಹರಿಸಿ, ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಲು ಎಲ್ಲಾ ಕನ್ನಡಿಗರು ಶ್ರಮಿಸಿ, ಆರಾಧಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದ್ದಾರೆ.
ಕಲಬುರಗಿಯಲ್ಲಿ ಇಂದು 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, 2500 ವರ್ಷಗಳ ಐತಿಹ್ಯ ವಿರುವ ಕನ್ನಡ ಭಾಷೆ ಶ್ರೀಮಂತವಾಗಿದ್ದು, ಗಟ್ಟಿಯಾಗಿದೆ. 12ನೇ ಶತಮಾನದಲ್ಲಿ ಶರಣರು ಕನ್ನಡ ಭಾಷೆ ಬೆಳೆಸಲು ಶ್ರಮಿಸಿದ್ದಾರೆ. ನಾವು ಇಂದು ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ. ಯಾರು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಕನ್ನಡಿಗರು ಕನ್ನಡ ಭಾಷೆಯಲ್ಲೇ ಉತ್ತರಿಸಬೇಕು ಎಂದರು.
ನುಡಿಯ ಆರಾಧನೆ ಸಾಹಿತ್ಯಸಮ್ಮೆಳನದ ಧ್ಯೇಯ. ಕವಿಗಳು, ಸಾಹಿತಿಗಳು, ಸಂಶೋದಕರು, ಅಧ್ಯಾಪಕರು, ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಇದೊಂದು ಸ್ತುತ್ಯಾರ್ಹ ಸಮ್ಮೇಳನವಾಗಿ ಹೊರಹೊಮ್ಮಬೇಕು. ಶರಣರು, ಸೂಫಿ ಸಂತರ ಈ ನಾಡಲ್ಲಿ ಲಕ್ಷೋಪ ಲಕ್ಷೋಪ ಸಂಖ್ಯೆಯಲ್ಲಿ ಜನಸಾಗರ ಸಮ್ಮೇಳನಕ್ಕೆ ಆಗಮಿಸುತ್ತಿರುವುದು ಸಮ್ಮೇಳನಕ್ಕೆ ಮತ್ತಷ್ಟು ಮೆರಗು ನೀಡಿದೆ. ನಾಡು ಹಾಗೂ ನುಡಿಯ ಆರಾಧನೆ ಮತ್ತು ಸಬಲೀಕರಣಕ್ಕೆ ಪೂರಕವಾಗುವ ಈ ರೀತಿಯ ಸಾಹಿತ್ಯ ಸಮ್ಮೇಳನಗಳು ಬೇರಾವ ರಾಜ್ಯಗಳಲ್ಲೂ ನಡೆದಿಲ್ಲ ಎನ್ನುವುದನ್ನು ವಿಶ್ಲೇಷಿಸಿದಾಗ ಕನ್ನಡಿಗರ ಭಾಷೆ ಹಾಗೂ ನಾಡಪ್ರೇಮದ ಬಗ್ಗೆ ಇಮ್ಮಡಿಯಾಗಲಿದೆ ಎಂದರು
Advertisement