ತಾಯಿಯ ಕತ್ತು ಸೀಳಿ, ಪ್ರಿಯತಮನ ಜೊತೆ ಅಂಡಮಾನ್‍ಗೆ ಎಸ್ಕೇಪ್ ಆಗಿದ್ದ ಬೆಂಗಳೂರು ಟೆಕ್ಕಿ ಮಾಡಿದ್ದು ಬರೋಬ್ಬರಿ 19 ಲಕ್ಷ ಸಾಲ!

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವಂತೆ ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಗೆಳೆಯನ ಜೊತೆ ಅಂಡಮಾನ್ ಮತ್ತು ನಿಕೋಬಾರ್ ಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಕೆಆರ್ ಪುರಂನ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದ್ದಾರೆ.
ಅಮೃತ-ಶ್ರೀಧರ್
ಅಮೃತ-ಶ್ರೀಧರ್

ಬೆಂಗಳೂರು: ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವಂತೆ ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಗೆಳೆಯನ ಜೊತೆ ಅಂಡಮಾನ್ ಮತ್ತು ನಿಕೋಬಾರ್ ಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಕೆಆರ್ ಪುರಂನ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದ್ದಾರೆ.

ಫೆಬ್ರವರಿ 2ರಂದು ಬೆಳಗಿನ ಜಾವ 8 ಬಾರಿ ತಾಯಿಗೆ ಇರಿದು ಕೊಲೆ, ಇದೇ ವೇಳೆ ತಮ್ಮನ ಕತ್ತು ಮತ್ತು ಬೆನ್ನಿನ ಮೇಲೆ ಇರಿದಿದ್ದ ಆರೋಪಿ ಅಮೃತ ಗೆಳೆಯ ಶ್ರೀಧರ್ ಜೊತೆ ಬೈಕ್ ಏರಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 

ಇದೀಗ ಆಘಾತಕಾರಿ ಸುದ್ದಿಯನ್ನು ಅಮೃತ ಬಿಚ್ಚಿಟ್ಟಿದ್ದು ಬರೋಬ್ಬರಿ 19 ಲಕ್ಷ ರುಪಾಯಿ ಸಾಲ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಇನ್ನು ಸಾಲಗಾರರು ಮನೆ ಮುಂದೆ ಬಂದು ಗಲಾಟೆ ಮಾಡಿದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿ ತಾಯಿ ಮತ್ತು ತಮ್ಮನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಳಂತೆ. ಇನ್ನು ತಾಯಿಯ ಹತ್ಯೆಗೆ ನಾಲ್ಕು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು. ಇದಕ್ಕಾಗಿ ಡೆಕೆತ್ಲಾನ್ ನಿಂದ 2 ಚಾಕುವನ್ನು ಖರೀದಿಸಿದ್ದಳು. 

ಟೆಕ್ಕಿಯಾಗಿದ್ದ ಅಮೃತ 15 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದಳು. ಸಾಲವನ್ನು ತೀರಿಸಲಾಗದೆ ಆತಂಕಕ್ಕೀಡಾಗಿದ್ದಳು. ಇದೇ ವೇಳೆ ಅಪಘಾತದಲ್ಲಿ ತನ್ನ ಕಾರು ಜಖಂಗೊಂಡಿತ್ತು. ಅದನ್ನು ರಿಪೇರಿ ಮಾಡಿಸಲು ಮತ್ತೇ 4 ಲಕ್ಷ ರುಪಾಯಿ ಸಾಲ ಮಾಡಿದ್ದಳು.

ಕೊಲೆ ಸಂಬಂಧ ಮತ್ತೋರ್ವ ಆರೋಪಿ ಶ್ರೀಧರ್ ತನಗೆ ಕೊಲೆ ವಿಚಾರ ತಿಳಿದಿರಲಿಲ್ಲ. ಅಂಡಮಾನ್ ಗೆ ತೆರಳಿದ ನಂತರ ಈ ವಿಚಾರ ನನಗೆ ಹೇಳಿದ್ದಳು ಎಂದು ಮಾಹಿತಿ ನೀಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com