ಬೆಂಗಳೂರು: ಕಲ್ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳ ದುರ್ಮರಣ

ಕೆರೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಕೆರೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ನಡೆದಿದೆ. 

ಕಲ್ಕೆರೆ ಕೆರೆಯಲ್ಲಿ ಶುಕ್ರವಾರ ಪಾರ್ಟಿ ಮಾಡಿದ್ದ ಇಬ್ಬರು ಟೆಕ್ಕಿಗಳಲ್ಲಿ ಪೈಕಿ ಒಬ್ಬನ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸಚಿನ್ ಹಾಗೂ ಉಲ್ಲಾಸ್ ಎಂಬ ಇಬ್ಬರು ಟೆಕ್ಕಿಗಳು ಶುಕ್ರವಾರ ರಾತ್ರಿ ಪಾರ್ಟಿ ಮಾಡಲು ತೆರಳಿದ್ದರು. ಪಾರ್ಟಿ ಮುಗಿಸಿ ಕೆರೆಯಲ್ಲಿ ಟೆಕ್ಕಿಗಳು ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ತೆಪ್ಪ ಮಗುಚಿ ಸಚಿನ್
ನೀರಿಗೆ ಬಿದ್ದಿದ್ದಾರೆ. 

ಮತ್ತೊಬ್ಬ ಟೆಕ್ಕಿ ಉಲ್ಲಾಸ್ ಅವರನ್ನು ರಕ್ಷಿಸಲು ಕೆರೆಗೆ ಹಾರಿ ಅವರು ಸಹ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸಚಿನ್ ದೇಹ ಹೊರ ತೆಗೆದಿದ್ದಾರೆ.  ಉಲ್ಲಾಸ್ ಶವ ಇನ್ನೂ ಪತ್ತೆಯಾಗಿಲ್ಲ. ರಾಮಮೂರ್ತಿ ನಗರ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com