ಮಂಗಳೂರು: ಕಾರಿಗೆ ಲಾರಿ ಡಿಕ್ಕಿ, ಸಹಾಯಕ ಪ್ರೊಫೆಸರ್ ಸೇರಿ ಇಬ್ಬರ ಸಾವು

ಟ್ಯಾಂಕರ್‌ ಲಾರಿ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮಂಗಳೂರು: ಕಾರಿಗೆ ಲಾರಿ ಡಿಕ್ಕಿ, ಸಹಾಯಕ ಪ್ರೊಫೆಸರ್ ಸೇರಿ ಇಬ್ಬರ ಸಾವು
ಮಂಗಳೂರು: ಕಾರಿಗೆ ಲಾರಿ ಡಿಕ್ಕಿ, ಸಹಾಯಕ ಪ್ರೊಫೆಸರ್ ಸೇರಿ ಇಬ್ಬರ ಸಾವು

ಮಂಗಳೂರು: ಟ್ಯಾಂಕರ್‌ ಲಾರಿ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ನೆಲ್ಯಾಡಿಯ ಕಾಂಚನ ನಿವಾಸಿಗಳಾದ ಸಹಾಯಕ ಪ್ರೊಫೆಸರ್ ಡಾ.ಜೈನಿ ಶಾಜಿ (30) ಹಾಗೂ ಜಿತಿನ್ (40) ಮೃತಟ್ಟವರು. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

ಬೆಳ್ತಂಗಡಿ ಉಜಿರೆಯ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ. ಜೈನಿ ಶಾಜಿ ಇಂದು ಬೆಳಗ್ಗೆ ಕಾರಿನಲ್ಲಿ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದಾಗ ವಿರುದ್ದ ಡಿಕ್ಕಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. 

ಮೃತರ ಶವಗಳನ್ನು ಪುತ್ತೂರಿನ ಸಮುದಾಯ ಆರೋಗ್ಯ ಕೇಂದ್ರದ ಶಾವಾಗಾರದಲ್ಲಿರಿಸಲಾಗಿದೆ. ಉಪ್ಪಿನಂಗಡಿ ಹಾಗೂ ಪುತ್ತೂರಿನ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com