ಅ, ಆ ಬರೆಯುವ ವಿಚಾರಕ್ಕೆ ಕೆಂಡಾಮಂಡಲ: ಮಗುವನ್ನು ಅಮಾನವೀಯವಾಗಿ ಥಳಿಸಿದ ಅಂಗನವಾಡಿ ಕಾರ್ಯಕರ್ತೆ

ಅ, ಆ ಬರೆಯುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಗುವನ್ನು ಅಮಾನವೀಯವಾಗಿ ಥಳಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ. 
ಮಗುವಿಗೆ ಥಳಿಸುತ್ತಿರುವ ಅಂಗನವಾಡಿ ಸಿಬ್ಬಂದಿ
ಮಗುವಿಗೆ ಥಳಿಸುತ್ತಿರುವ ಅಂಗನವಾಡಿ ಸಿಬ್ಬಂದಿ

ಕೊಪ್ಪಳ: ಅ, ಆ ಬರೆಯುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಗುವನ್ನು ಅಮಾನವೀಯವಾಗಿ ಥಳಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ. 

ಮಗುವನ್ನು ಥಳಿಸಿದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಗಮ್ಮ ಎಂದು ಹೇಳಲಾಗುತ್ತಿದೆ. ಅ, ಆ ಬರೆದು ಕೊಡುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಸಂಗಮ್ಮ ಮಗುವಿಗೆ ಥಳಿಸಿ, ಕಪಾಳಕ್ಕೆ ಹೊಡೆದಿದ್ದಾಳೆ. ಅಷ್ಟೇ ಅಲ್ಲದೆ, ಬಾಯಿಗು ಬಡಿದು, ಕಟ್ಟಿಯಿಂದ ಅಮಾನವೀಯವಾಗಿ ಥಳಿಸಿದ್ದಾಳೆ. 

ಮಗುವನೊಂದಿಗೆ ಅಂಗನವಾಡಿ ಕಾರ್ಯಕರ್ತೆ ಅಮಾನವೀಯವಾಗಿ ವರ್ತಿಸಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಘಲಲ್ಲಿ ಹರಿದಾಡತ್ತಿದ್ದು, ವೈರಲ್ ಆಗಿದೆ. ಮಹಿಳೆ ವಿರುದ್ಧ ಇದೀಗ ಹಲವು ಟೀಕೆಗಳು ವ್ಯಕ್ತವಾಗತೊಡಗಿವೆ. ಘಟನೆ ಗುಂಡೂರು ಗ್ರಾಮದ ಸಜ್ಜಿಹೊಲ ಏರಿಯಾ ಅಂಗವಾಡಿ ಕೇಂದ್ರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com