ಉಡುಪಿ  ಕೃಷ್ಣಮಠದ  ಕೊಳದಲ್ಲಿ ಮುಳುಗಿ ಚೆನ್ನೈ  ವ್ಯಕ್ತಿ  ಸಾವು

ಚೆನ್ನೈನ  62 ವರ್ಷದ  ವ್ಯಕ್ತಿಯೊಬ್ಬರು  ಶ್ರೀ ಕೃಷ್ಣ ಮಠದ  ಮಾಧ್ವ ಸರೋವರದಲ್ಲಿ   ಮಂಗಳವಾರ ಮುಂಜಾನೆ  ನೀರನಲ್ಲಿ ಮುಳುಗಿ  ಸಾವನ್ನಪ್ಪಿರುವ  ದುರಂತ ಘಟನೆ  ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ:  ಚೆನ್ನೈನ  62 ವರ್ಷದ  ವ್ಯಕ್ತಿಯೊಬ್ಬರು   ಶ್ರೀ ಕೃಷ್ಣ ಮಠದ  ಮಾಧ್ವ ಸರೋವರದಲ್ಲಿ   ಮಂಗಳವಾರ ಮುಂಜಾನೆ  ನೀರನಲ್ಲಿ ಮುಳುಗಿ  ಸಾವನ್ನಪ್ಪಿರುವ  ದುರಂತ ಘಟನೆ  ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕ್ಯಾಪ್ಟನ್ ಜಿ. ಶ್ರೀಧರನ್   ಎಂದು ಗುರುತಿಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಪವಿತ್ರ ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದಾಗ   ಶ್ರೀಧರನ್  ಅಕಸ್ಮಿಕವಾಗಿ  ಕಾಲು ಜಾರಿ ಬಿದ್ದು  ಸಾವನ್ನಪ್ಪಿರುವ  ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಘಟನೆ ಬೆಳಗಿನ ಜಾವ  ನಾಲ್ಕು ಗಂಟೆಗೆ ನಡೆದಿದೆ  ಎಂದು ಹೇಳಲಾಗಿದೆ.

ಉಡುಪಿ ಪೊಲೀಸರು   ಈ ಸಂಬಂಧ   ಅಸ್ವಾಭಾವಿಕ ಸಾವಿನ ಪ್ರಕರಣವನ್ನು  ದಾಖಲಿಸಿಕೊಂಡು  ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com