ಬೆಂಗಳೂರು: ತಡರಾತ್ರಿ ರೌಡಿಶೀಟರ್ ಬಿಲಾವಟ್ ತಬ್ರೇಜ್ ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಕೆಜಿ ಹಳ್ಳಿ ಬಿಎಂ ಲೇಔಟ್ ಬಳಿ ತಬ್ರೇಜ್ ನಲ್ಲಿ ಹತ್ಯೆ ಮಾಡಲಾಗಿದೆ. ಕೆಜಿಹಳ್ಳಿಯ ರೌಡಿಶೀಟರ್ ತಬ್ರೇಜ್ ವಿರುದ್ಧ ಹತ್ಯೆ, ಹತ್ಯೆ ಯತ್ನ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಜೈಲಿನಲ್ಲಿದ್ದ ತಬ್ರೇಜ್ ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ.
ಹಳೆಯ ದ್ವೇಷ ಹಿನ್ನೆಲೆಯಲ್ಲಿ ತಬ್ರೇಜ್ ನನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು ರೌಡಿಶೀಟರ್ ಶಬಾಜ್ ತಂಡದ ವಿರುದ್ಧ ಕೊಲೆ ಮಾಡಿದ ಆರೋಪ ದಾಖಲಾಗಿದೆ.
ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Advertisement