ಬೆಂಗಳೂರು: ಸ್ಕೂಟರ್ಗೆ ನೀರು ಸರಬರಾಜು ಟ್ಯಾಂಕರ್ ಡಿಕ್ಕಿ ಹೊಡದ ಪರಿಣಾಮ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ವೈಟ್ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಇಂದಿರಾನಗರದ ಶ್ರೇಯಶ್. ಡಿ ಆಚಾರ್ಯ (26) ಮೃತಪಟ್ಟ ಸಾಫ್ಟ್ ವೇರ್ ಇಂಜಿನಿಯರ್. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಆಚಾರ್ಯ ಅವರು, ಡಿಯೋ ಸ್ಕೂಟರ್ನಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಮಾರತ್ಹಳ್ಳಿಯಿಂದ ವೈಟ್ಫೀಲ್ಡ್ ಕಡೆಗೆ ಬರುತ್ತಿದ್ದಾಗ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಆಚಾರ್ಯ ಅವರ ತಂದೆ ದಿವಾಕರ ಅವರು ಅಂಚೆ ಕಚೇರಿಯ ನಿವೃತ್ತ ನೌಕರರಾಗಿದ್ದಾರೆ. ಅವರಿಗೆ ಆಚಾರ್ಯ ಒಬ್ಬನೇ ಪುತ್ರನಾಗಿದ್ದು, ಮಗಳನ್ನು 4 ತಿಂಗಳ ಹಿಂದಷ್ಟೇ ವಿವಾಹ ಮಾಡಲಾಗಿತ್ತು ಎಂದು ಪ್ರಕರಣ ದಾಖಲಿಸಿಕೊಂಡಿರುವ ವೈಟ್ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ.
Advertisement