ಮತ್ತೂಟ್ ಫೈನಾನ್ಸ್'ನಲ್ಲಿ 77 ಕೆಜಿ ಚಿನ್ನ ದರೋಡೆ ಪ್ರಕರಣ: 3 ಆರೋಪಿಗಳ ಬಂಧನ

ಇತ್ತೀಚೆಗೆ ಲಿಂಗರಾಜಪುರದ ಮುತ್ತೂಟ್ ಫೈನಾನ್ಸ್ ಕಚೇರಿಯ ರೂ.16 ಕೋಟಿ ಮೌಲ್ಯದ 77 ಕೆಜಿ ಚಿನ್ನ ಕಳ್ಳತನ ಪ್ರಕರಣ ಸಂಬಂಧ ಪುಲಿಕೇಶಿ ನಗರ ಉಪ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೂವರು ಖದೀಮರನ್ನು ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ಲಿಂಗರಾಜಪುರದ ಮುತ್ತೂಟ್ ಫೈನಾನ್ಸ್ ಕಚೇರಿಯ ರೂ.16 ಕೋಟಿ ಮೌಲ್ಯದ 77 ಕೆಜಿ ಚಿನ್ನ ಕಳ್ಳತನ ಪ್ರಕರಣ ಸಂಬಂಧ ಪುಲಿಕೇಶಿ ನಗರ ಉಪ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೂವರು ಖದೀಮರನ್ನು ಬಂಧನಕ್ಕೊಳಪಡಿಸಿದ್ದಾರೆ. 

ಫೈನಾನ್ಸ್ ಸಂಸ್ಥೆಗೆ ಕನ್ನ ಹಾಕಿದ ಬಳಿಕ 12 ಆರೋಪಿಗಳು, ಪ್ರತ್ಯೇಕ ತಂಡಗಳಾಗಿ ನಗರ ತೊರೆದಿದ್ದರು. ಈ ಪೈಕಿ ಹೊರ ರಾಜ್ಯದಲ್ಲಿ ಮೂವರು ವಿಶೇಷ ತಂಡದ ಬಲೆಗೆ ಬಿದ್ದಿದ್ದಾರೆ. ಆರೋಪಿಗಳ ಬಳಿಯಿದ್ದ ಚಿನ್ನಾಭರಣವನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಪೊಲೀಸರ ತನಿಖೆಯಿಂದ ಭಯಗೊಂಡಿದ್ದ ಆರೋಪಿಗಳು, ನಗರ ತೊರೆಯುವ ವೇಳೆಗೆ ರಾಜ್ಯ ಗಡಿ ಭಾಗದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com