ಪುತ್ತೂರು ಬಳಿ ಬಸ್ ಹಳ್ಳಕ್ಕೆ ಉರುಳಿ 20 ಮಂದಿಗೆ ಗಾಯ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮೈ ಸಮೀಪ ಖಾಸಗಿ ಬಸ್ ವೊಂದು ಕಳೆದ ರಾತ್ರಿ ರಸ್ತೆಬದಿಯ ಹಳ್ಳಕ್ಕೆ ಉರುಳಿ ಅದರಲ್ಲಿದ್ದ 27 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುತ್ತೂರು:  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮೈ ಸಮೀಪ ಖಾಸಗಿ ಬಸ್ ವೊಂದು ಕಳೆದ ರಾತ್ರಿ ರಸ್ತೆಬದಿಯ ಹಳ್ಳಕ್ಕೆ ಉರುಳಿ ಅದರಲ್ಲಿದ್ದ 27 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. 
 
ಅಮೈ ನಲ್ಲಿನ ಕಿರಿದಾದ ಸೇತುವೆ ಮೇಲೆ ಸಾಗುತ್ತಿದ್ದಾಗ ಬೆಂಗಳೂರಿಗೆ ಹೊರಟಿದ್ದ ಬಸ್ ನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಪಘಾತದಿಂದ ಬಸ್ ಜಖಂಗೊಂಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕಳೆದ ರಾತ್ರಿ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಆಂಧ್ರಪ್ರದೇಶ  ಅನಂತ  ಪುರದಿಂದ   ಪ್ರವಾಸಕ್ಕೆ  ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು  ಪ್ರಯಾಣಿಸುತ್ತಿದ್ದ  ಬಸ್ ಕಂದಕಕ್ಕೆ ಉರುಳಿ  ಬಿದ್ದು  ಓರ್ವ  ವಿದ್ಯಾರ್ಥಿ ಮೃತಪಟ್ಟು, ಇತರ ೧೨ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕು ಗೇರು ಸೊಪ್ಪ ಬಳಿ  ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com