ಬೆಂಗಳೂರು: ಆತ್ಮರಕ್ಷಣೆಗೆ ಇಬ್ಬರು ರೌಡಿಗಳ ಕಾಲಿಗೆ ಗುಂಡು ಹೊಡೆದ ಸಿಸಿಬಿ ಪೊಲೀಸರು 

ಆತ್ಮರಕ್ಷಣೆಗಾಗಿ ಇಬ್ಬರು ರೌಡಿಗಳ ಮೊಣಕಾಲು ಕೆಳಗೆ ಕಾಲಿಗೆ ನಗರ ಅಪರಾಧ ವಿಭಾಗದ ಪೊಲೀಸರು ಸೋಮವಾರ ಬೆಳಗ್ಗೆ ಗುಂಡೇಟು ನೀಡಿದ ಘಟನೆ ನಡೆದಿದೆ.
ಬೆಂಗಳೂರು: ಆತ್ಮರಕ್ಷಣೆಗೆ ಇಬ್ಬರು ರೌಡಿಗಳ ಕಾಲಿಗೆ ಗುಂಡು ಹೊಡೆದ ಸಿಸಿಬಿ ಪೊಲೀಸರು 

ಬೆಂಗಳೂರು: ತಮ್ಮ ಆತ್ಮ ರಕ್ಷಣೆಗಾಗಿ ಇಬ್ಬರು ರೌಡಿಶೀಟರ್​​ಗಳ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬಿಟಿಎಂ ಲೇಔಟ್​​​ನ ರಂಕಾ ಕಾಲೋನಿ ಬಳಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.


ಮಹೇಶ್​ ಅಲಿಯಾಸ್ ಹಂದಿ ಮಹೇಶ್ ಮತ್ತು ಸತೀಶ್ ಎಂಬ ರೌಡಿ ಶೀಟರ್ ಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.


ಆರೋಪಿ ಮಹೇಶ್ ವಿರುದ್ಧ 2 ಕೊಲೆ ಪ್ರಕರಣ ಸೇರಿ ಒಟ್ಟ 5 ಪ್ರಕರಣಗಳು ಹಾಗೂ ಸತೀಶ್ ವಿರುದ್ಧ 3 ಕೊಲೆ ಸೇರಿ 5 ಪ್ರಕರಣಗಳು ದಾಖಲಾಗಿದ್ದವು.

ಹೀಗಾಗಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಪೊಲೀಸ್ ರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರೂ, ಅವರು ಪೊಲೀಸ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. 

ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com