ಗಂಗಾವತಿ:ಅಜ್ಜ ಹಾಗೂ ಅಜ್ಜಿಯ ಜೊತೆಗೆ ತೀರ್ಥಯಾತ್ರೆಗೆ ಬಂದಿದ್ದ ಬಾಲಕನೊಬ್ಬ ಕಾಲುಜಾರಿ ಸರೋವರದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ಬಾಲಕನನ್ನು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಅಂಕಿತ್ ದಖಡ್ ತಂದೆ ಪರ್ವತಸಿಂಗ್ (10) ಎಂದು ಗುರುತಿಸಲಾಗಿದೆ.
ತೀರ್ಥಯಾತ್ರೆಯ ಉದ್ದೇಶಕ್ಕೆ ತಾತ ಜಾನಕಿ ಲಾಲ್ ಹಾಗೂ ಅಜಿ ಕಾಂಚನಾ ಜೊತೆ ಈ ಬಾಲಕ ಬಂದಿದ್ದ. ಸರೋವರದ ಮೆಟ್ಟಿಲ ಮೇಲಿಳಿದು ನೀರು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿಗೆ ಎನ್ನಲಾಗಿದೆ. ಮುಳುಗು ತಜ್ಞರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹುಡಿಕಿದ ಬಳಿಕ ಬಾಲಕ ಶವ ಪತ್ತೆಯಾಗಿದೆ. ಶವ ಸಿಕ್ಕುತ್ತಿದ್ದಂತೆಯೇ ಅಜ್ಜ-ಅಜ್ಜಿಯರ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಕಾಂತ್ ಭೇಟಿ ನೀಡಿದ್ದಾರೆ.
Advertisement