ನಿಗೂಢ ಸ್ಫೋಟದಲ್ಲಿ ಶಾಸಕ ಹ್ಯಾರಿಸ್'ಗೆ ಗಾಯ: ಉದ್ದೇಶಪೂರ್ವಕ ದಾಳಿ ಎಂದ ಪುತ್ರ ನಲಪಾಡ್

ವಿವೇಕನಗರದ ವನ್ನಾರಪೇಟೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ ಶಾಸಕ ಹ್ಯಾರಿಸ್ ಅವರು ಗಾಯಗೊಂಡಿದ್ದು, ಸ್ಫೋಟ ಉದ್ದೇಶಪೂರ್ವಕವಾಗಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಅವರು ಹೇಳಿದ್ದಾರೆ. 
ಹ್ಯಾರಿಸ್ ಪುತ್ರ ನಲಪಾಡ್
ಹ್ಯಾರಿಸ್ ಪುತ್ರ ನಲಪಾಡ್

ಬೆಂಗಳೂರು: ವಿವೇಕನಗರದ ವನ್ನಾರಪೇಟೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ ಶಾಸಕ ಹ್ಯಾರಿಸ್ ಅವರು ಗಾಯಗೊಂಡಿದ್ದು, ಸ್ಫೋಟ ಉದ್ದೇಶಪೂರ್ವಕವಾಗಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಅವರು ಹೇಳಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿ ಕಾರ್ಯಕ್ರಮದಲ್ಲಿ ಕೆಲವು ದುಷ್ಕೃತ್ಯ ಎಸಗಿದ್ದಾರೆ. ಇದು ಖಂಡಿತವಾಗಿಯೂ ಪಟಾಕಿಯಿಂದಾಗಿ ಸಂಭವಿಸಿದ ಸ್ಫೋಟವಲ್ಲ. ಕಚ್ಚಾ ಬಾಂಬ್ ಬಳಕೆಯಾಗಿರುವ ಅನುಮಾನವಿದೆ ಎಂದು ಆಸೋಪಿಸಿದ್ದಾರೆ. 

ನಮ್ಮ ಕ್ಷೇತ್ರದಲ್ಲಿ ಯಾರೂ ವೈರಿಗಳಿಲ್ಲ. ದೇವರ ದಯೆಯಿಂದ ಪ್ರಾಣಾಪಾಯದಿಂದ ತಂದೆ ಪಾರಾಗಿದ್ದಾರೆ. ಅವರಿಗೆ ಕಾಲಿಗೆ ಸುಟ್ಟು ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. 

ಕಾರ್ಯಕ್ರಮಕ್ಕೆ ನಾನು 5 ನಿಮಿಷ ತಡವಾಗಿ ತೆರಳಿದ್ದೆ. ಅಷ್ಟರಲ್ಲಾಗಲೇ ಘಟನೆ ನಡೆದು ಹೋಗಿತ್ತು. ಕೂಡಲೇ ಆಸ್ಪತ್ರೆಗೆ ಧಾವಿಸಿದೆ. ಇತರೆ ಮೂವರೂ ಕೂಡ ಸುರಕ್ಷಿತವಾಗಿದ್ದಾರೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com