ಮಂಗಳೂರು ಬಾಂಬ್ ಆತಂಕ: ತನ್ನ ಬ್ಯಾಗ್ ಮೇಲೆ ಹೆಚ್ಚು ಬಾಂಧವ್ಯ ಹೊಂದಿದ್ದ ಆರೋಪಿ ಆದಿತ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ತನ್ನ ಬಳಿಯಿದ್ದ ಬ್ಯಾಗ್ ವೊಂದರ ಮೇಲೆ ಸಾಕಷ್ಟು ಬಾಂಧವ್ಯ ಹೊಂದಿದ್ದ. ಎಲ್ಲಿಯೇ ಹೋದರೂ ಅಲ್ಲಿಗೆ ತನ್ನ ಬ್ಯಾಗ್'ನ್ನು ಹೊತ್ತೊಯ್ಯುತ್ತಿದ್ದ ಎಂದು ಆರೋಪಿ ಅದಿತ್ಯ ಕೆಲಸ ಮಾಡುತ್ತಿದ್ದ ಹೋಟೆಲ್'ನ ಸಿಬ್ಬಂದಿಗಳು ಆರೋಪಿ ಬಗ್ಗೆ ಮಾಹಿತಿ ನೀಡಿದ್ದಾರೆ. 
ಮಂಗಳೂರು ಬಾಂಬ್ ಆತಂಕ: ತನ್ನ ಬ್ಯಾಗ್ ಮೇಲೆ ಹೆಚ್ಚು ಬಾಂಧವ್ಯ ಹೊಂದಿದ್ದ ಆರೋಪಿ ಆದಿತ್ಯ
ಮಂಗಳೂರು ಬಾಂಬ್ ಆತಂಕ: ತನ್ನ ಬ್ಯಾಗ್ ಮೇಲೆ ಹೆಚ್ಚು ಬಾಂಧವ್ಯ ಹೊಂದಿದ್ದ ಆರೋಪಿ ಆದಿತ್ಯ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ತನ್ನ ಬಳಿಯಿದ್ದ ಬ್ಯಾಗ್ ವೊಂದರ ಮೇಲೆ ಸಾಕಷ್ಟು ಬಾಂಧವ್ಯ ಹೊಂದಿದ್ದ. ಎಲ್ಲಿಯೇ ಹೋದರೂ ಅಲ್ಲಿಗೆ ತನ್ನ ಬ್ಯಾಗ್'ನ್ನು ಹೊತ್ತೊಯ್ಯುತ್ತಿದ್ದ ಎಂದು ಆರೋಪಿ ಅದಿತ್ಯ ಕೆಲಸ ಮಾಡುತ್ತಿದ್ದ ಹೋಟೆಲ್'ನ ಸಿಬ್ಬಂದಿಗಳು ಆರೋಪಿ ಬಗ್ಗೆ ಮಾಹಿತಿ ನೀಡಿದ್ದಾರೆ. 

ಆದಿತ್ಯನ ಬಳಿ ಯಾವಾಗಲೂ ಒಂದು ಬ್ಯಾಗ್ ಇರುತ್ತಿತ್ತು. ಅವರು ಎಲ್ಲಿಯೇ ಹೋಗಲಿ, ಆ ಬ್ಯಾಗ್ ಕೊಂಡೊಯ್ಯುತ್ತಿದ್ದ. ಬಾತ್ ರೂಮ್'ಗೆ ಹೋಗುವಾಗಲೂ ಬ್ಯಾಗ್ ನೊಂದಿಗೇ ಹೋಗುತ್ತಿದ್ದ ಎಂದು ಹೇಳಿದ್ದಾರೆ. 

ಹೋಟೆಲ್ ನ ಬಿಲ್ಲಿಂಗ್ ಸೆಕ್ಷನ್ ನಲ್ಲಿ ತಾನು ಕೂರುವ ಕುರ್ಚಿ ಪಕ್ಕದಲ್ಲಿಯೇ ಆ ಬ್ಯಾಗ್ ಇಟ್ಟುಕೊಳ್ಳುತ್ತಿದ್ದ. ಆತ ವ್ಯಾಯಾಮ ಮಾಡಲು ಡಂಬಲ್ಸ್ ಇಟ್ಕೊಂಡಿದ್ದ. ಒಮ್ಮೆ ಅವನ ಬಳಿ ಬಿಳಿ ಬಣ್ಣದ ಹುಡಿ ಇರುವುದು ತಿಳಿದಿತ್ತು. ಈ ವೇಳೆ ಅದೇನೆಂದು ಕೇಳಿದಾಗ ಡಂಬಲ್ಸ್ ಬಿಡಿಯುವಾಗ ಜಾರದಂತೆ ಗ್ರಿಪ್ ಗಾಗಿ ಇಟ್ಟುಕೊಂಡಿದ್ದೇನೆಂದು ಹೇಳಿದ್ದ. ನಮಗೆ ಯಾವುದೇ ರೀತಿಯ ಅನುಮಾನ ಬಂದಿರಲಿಲ್ಲ. ಆಗಾಗ ಇಂಗ್ಲೀಷಿನಲ್ಲಿ ಫೋನ್ ನಲ್ಲಿ ಮತಾನಾಡುತ್ತಿದ್ದ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com