ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಜಾಮೀನು ಅರ್ಜಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ.
ದೂರುದಾರ ಲೇನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಏಕಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಉತ್ತರ ನೀಡುವಂತೆ ನಿತ್ಯಾನಂದ ಹಾಗೂ ಸಿಐಡಿ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
ಪ್ರಕರಣ ಕುರಿತು ಕೋರ್ಟ್ನಲ್ಲಿ ವಾದ ಮಾಡಿದ ಲೇನಿನ್ ಪರ ವಕೀಲರು, ನಿತ್ಯಾನಂದನ ಮೇಲೆ ಜಾಮೀನು ಷರತ್ತುಗಳನ್ನ ಉಲ್ಲಂಘಿಸಿರುವ ಆರೋಪವಿದ್ದು, ಕೋರ್ಟ್ ವಿಚಾರಣೆಗೂ ಕೂಡ ಸರಿಯಾಗಿ ಹಾಜರಾಗುತ್ತಿಲ್ಲ.
ಅಲ್ಲದೇ ಅವಧಿ ಮುಗಿದ ಪಾಸ್ಪೋರ್ಟ್ ಹಿಡಿದುಕೊಂಡು, ದೇಶದಿಂದ ಪರಾರಿಯಾಗಿದ್ದಾನೆಂಬ ಆರೋಪವೂ ಇದೆ. ಹೀಗಿರುವಾಗ ಭಾರತದಲ್ಲಿರುವಂತೆ ವಿನಾಯಿತಿ ಅರ್ಜಿ ಬೇರೆ ಸಲ್ಲಿಸಿದ್ದಾನೆ. ನಿತ್ಯಾನಂದನ ನಡೆ ಕಾನೂನಿಗೆ ವಿರೋಧವಿದ್ದು, ಆತನ ಜಾಮೀನು ಅರ್ಜಿ ರದ್ದುಪಡಿಸಬೇಕೆಂದು, ಲೇನಿನ್ ಪರ ವಕೀಲರು ವಾದ ಮಂಡಿಸಿದ್ರು.
Advertisement