ಕೊಡಗು ಎಸ್ಪಿಗೆ ನೊಟೀಸ್ ಜಾರಿ ಮಾಡಿದ ಕಾರ್ಮಿಕ ಇಲಾಖೆ 

ವಲಸೆ ಕಾರ್ಮಿಕರ ಬೃಹತ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯ ಕಾರ್ಮಿಕ ಇಲಾಖೆ ಕೊಡಗು ಪೊಲೀಸ್ ಸೂಪರಿಂಟೆಂಡೆಂಟ್ ನೊಟೀಸ್ ಜಾರಿ ಮಾಡಿದ್ದಾರೆ.
ಕಾರ್ಮಿಕರ ದಾಖಲೆಗಳ ಪರಿಶೀಲನೆ
ಕಾರ್ಮಿಕರ ದಾಖಲೆಗಳ ಪರಿಶೀಲನೆ

ಮಡಿಕೇರಿ: ವಲಸೆ ಕಾರ್ಮಿಕರ ಬೃಹತ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯ ಕಾರ್ಮಿಕ ಇಲಾಖೆ ಕೊಡಗು ಪೊಲೀಸ್ ಸೂಪರಿಂಟೆಂಡೆಂಟ್ ನೊಟೀಸ್ ಜಾರಿ ಮಾಡಿದ್ದಾರೆ.


ಕೊಡಗು ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಆದೇಶವನ್ನು ಎಸ್ಪಿಗೆ ಹಸ್ತಾಂತರಿಸಿದ್ದಾರೆ. ಪರಿಶೀಲನೆ ಪ್ರಕ್ರಿಯೆಯ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಎಸ್ಪಿ ಡಾ ಸುಮನ್ ಡಿ ಪನ್ನೇಕರ್ ಅವರಿಗೆ ಆದೇಶಿಸಲಾಗಿದೆ. ಅಲ್ಲದೆ ಯಾವ ಕಾನೂನಿನಡಿ ಈ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಸಹ ನೊಟೀಸ್ ನಲ್ಲಿ ಕೇಳಲಾಗಿದೆ. 


ಕಳೆದ ವರ್ಷ ಕೂಡ ಈ ಪ್ರಕ್ರಿಯೆ ಮಾಡಲಾಗಿತ್ತೇ, ಕಾರ್ಮಿಕರ ವಿರುದ್ಧ ದೂರುಗಳು ಬಂದಿದ್ದವೇ?, ದೂರುಗಳು ಬಂದಿದ್ದರೆ ಅದರ ಪ್ರತಿ ಇವೆಯೇ ಎಂದು ಕೂಡ ಕೇಳಲಾಗಿದೆ. 


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ, ಕಾರ್ಮಿಕ ಇಲಾಖೆಯಿಂದ ನೊಟೀಸ್ ಬಂದಿದ್ದು ಭದ್ರತೆಯ ಕಾರಣಗಳಿಂದ ಪರಿಶೀಲನೆ ಮಾಡಲಾಗಿದೆ. ಇಲಾಖೆಗೆ ವರದಿ ನೀಡಲು ಸಮಯಾವಕಾಶ ಕೇಳಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com