ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು, ಇಬ್ಬರ ವಿರುದ್ಧ ಪ್ರಕರಣ ದಾಖಲು! 

ಪ್ರಧಾನಿ ನರೇಂದ್ರ ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು ರಚಿಸಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ ಗಂಗಾವತಿ ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು, ಇಬ್ಬರ ವಿರುದ್ಧ ಪ್ರಕರಣ ದಾಖಲು!
ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು, ಇಬ್ಬರ ವಿರುದ್ಧ ಪ್ರಕರಣ ದಾಖಲು!

ಗಂಗಾವತಿ: ಪ್ರಧಾನಿ ನರೇಂದ್ರ ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು ರಚಿಸಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ ಗಂಗಾವತಿ ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಜ.9-10 ರಂದು ಆಯೋಜಿಸಿದ್ದ ಆನೆಗೊಂದಿ ಉತ್ಸವದಲ್ಲಿ ಸಿರಾಜ್ ಬಿಸರಳ್ಳಿ ಎಂಬಾತ ಸಿಎಎ ವಿರುದ್ಧ ಹಾಡು ಬರೆದಿದ್ದ. ಇದೇ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ನೆಟ್.ಕಾಂ ನ ರಾಜಬಕ್ಸಿ ಎಂಬುವವರು ಹಂಚಿಕೊಂಡಿದ್ದರು. 

ಸಿಎಎ ಗೆ ಪ್ರಧಾನಿ ಯಾವಾಗ ದಾಖಲೆಗಳನ್ನು ಒದಗಿಸುತ್ತಾರೆ ಎಂಬ ಊಹಾತ್ಮಕ ಪ್ರಶ್ನೆ ಹಾಡಿನಲ್ಲಿತ್ತು. ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ದೇಶವಿರೋಧಿ ಹಾಡು ರಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಎಸ್ ಪಿ ಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com