ಬೆಂಗಳೂರು: ರಾಜ್ಯ ಸರ್ಕಾರದ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) 20 ನಾಮ ನಿರ್ದೇಶಿತ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ. ಈ ಸದಸ್ಯರು ಸೋಮವಾರ ಬೆಳಗ್ಗೆ 11.15ಕ್ಕೆ ಮಹಾಪೌರರಾದ ಗೌತಮ್ ಕುಮಾರ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಜಯಕುಮಾರ್. ಸಿ, ಆರ್. ಗೋಪಿನಾಥ್, ಮಂಜುನಾಥ್ ಸಿ.ಎಂ, ಸುಧೀರ್, ಸರ್ದಾರ್ ಮಲ್ ಸುರಾನ, ಪಿ.ಮಂಜುನಾಥ್, ಗಂಗರಾಜು ಟಿ.ಎಸ್, ಬಿ.ರಮೇಶ್, ಎಚ್.ಕೆ.ಮತ್ತಪ್ಪ, ವಿ.ವಿ.ವಿನಾಯಕ, ಸುಜಾತರಾಣಿ ಬಿ.ಸಿ, ಕೃಷ್ಣಮೂರ್ತಿ, ಎಂ. ರಾಮಮೂರ್ತಿ, ಉಮಾಮಗೇಶ್, ಎಂ.ಶ್ರೀರಾಮ, ಕೆ.ವೆಂಕಟೇಶ್, ಎ.ನಾರಾಯಣಸ್ವಾಮಿ, ಎ.ಎಂ.ಸತ್ಯರಾಜ್ , ಕೆ.ಎನ್.ಶ್ರೀಕಂಠಯ್ಯ ಮತ್ತು ರಮೇಶ್ ರಾಜು ಎಂಬುವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು.
Advertisement