ಬಾಗಲಕೋಟೆ: ತಾಲೂಕಿನ ಬೇವೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ಹೆಬ್ಬಾಳ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.
ಜನವರಿ ೨೮ ರಂದು ಸದರಿ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಹೆಬ್ಬಾಳ ಅವರು ವೇಳಾಪಟ್ಟಿಯಂತೆ ತರಗತಿಯಲ್ಲಿ ಪಾಠಬೋಧನೆ ಮಾಡದೇ ಕೇವಲ ೪ನೇ ತರಗತಿಗೆ ಕನ್ನಡ ಭಾಷೆಯನ್ನು ಅಷ್ಟೇ ಬೋಧಿಸಿರುವುದು, ಗೈರು ಹಾಜರಾದ ಮಕ್ಕಳನ್ನು ಶಾಲೆಗೆ ಕರೆತರಲು ಏನೂ ಕ್ರಮ ಕೈಗೊಳ್ಳದಿರುವುದು, ಪಾಠ ಬೋಧನೆ ಮಾಡುತ್ತಿರುವ ೪ನೇ ತರಗತಿಯಲ್ಲಿ ಒಂದೂ ಮಗು ಶಾಲೆಯಲ್ಲಿ ಇಲ್ಲದನ್ನು ಕಂಡು ಕರ್ತವ್ಯ ಲೋಪದ ಮೇಲೆ ಅಮಾನತ್ತುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.
Advertisement