ಮಾಜಿ ಸಚಿವ ಯುಟಿ ಖಾದರ್ ಗೆ ಬೆದರಿಕೆ ಹಾಕಿದ ಯುವಕರು, ವಿಡಿಯೋ ವೈರಲ್ 

ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಬಲ ಪಂಥೀಯ ಸಂಘಟನೆಯೊಂದರ ಯುವಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿರುವ ಕೆಲ ವಿಡಿಯೋಗಳು ವೈರಲ್ ಆಗಿವೆ.
ಯು.ಟಿ.ಖಾದರ್
ಯು.ಟಿ.ಖಾದರ್

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಬಲ ಪಂಥೀಯ ಸಂಘಟನೆಯೊಂದರ ಯುವಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿರುವ ಕೆಲ ವಿಡಿಯೋಗಳು ವೈರಲ್ ಆಗಿವೆ.

ಒಂದು ವಿಡಿಯೋದಲ್ಲಿ ಗುಂಪಾಗಿರುವ ಯುವಕರು, ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದ್ದು, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಯು.ಟಿ.ಖಾದರ್ ಅವರ ತಲೆ ಮತ್ತು ಕೈಕಾಲುಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ

 ಮಂಗಳೂರಿನಲ್ಲಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ  ಸಿಎಎ ಪರ ರ‍್ಯಾಲಿಯಲ್ಲಿ ಈ 
ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

ಕೇಸರಿ ಶಾಲು ಧರಿಸಿರುವ ಕೆಲ ಯುವಕರು, ಮಲಯಾಳಂನಲ್ಲಿ ಮಾತನಾಡಿದ್ದು, ಈ ವಿಚಾರದಲ್ಲಿ ಖಾದರ್ ತಲೆ ಹಾಕಬಾರದು. ಒಂದು ವೇಳೆ ತಲೆ ಹಾಕಿದರೆ ಅವರ ತಲೆ ಹಾಗೂ ಕೈ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಬೆದರಿಕೆ ಬಗ್ಗೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

'ನನಗೆ ಅಂತಹ ಬೆದರಿಕೆಗಳನ್ನು ನೀಡಿದವರಿಗೆ ನಾನು ಕರುಣೆ ತೋರಿಸುತ್ತೇನೆ. ಅವರನ್ನು ಜೈಲಿಗೆ ಕಳುಹಿಸಬಹುದು ಆದರೆ ಅವರ ಕುಟುಂಬ ಸದಸ್ಯರನ್ನು ತೊಂದರೆಗೆ ಸಿಲುಕಿಸಲು ನಾನು ಬಯಸುವುದಿಲ್ಲ. ಅಂತಹ ಬೆದರಿಕೆಗಳ ಬಗ್ಗೆ ನನಗೆ ತಲೆಕೆಡಿಸಿಕೊಳ್ಳುವುದಿಲ್ಲ, ತಮ್ಮ ಕೆಲ ಬೆಂಬಲಿಗರು ದೂರು ದಾಖಲಿಸಲು ಹೇಳಿದರು. ಆದರೆ, ನಾನು ಹಾಗೇ ಮಾಡುವುದಿಲ್ಲ ಎಂದು ಖಾದರ್ ಹೇಳಿದರು. 

ಮತ್ತೊಂದು ವಿಡಿಯೋದಲ್ಲಿ ಮಂಗಳೂರು ನಗರದಲ್ಲಿನ ಶ್ರೀ ಕೊರ್ಡಾಬು ದೈವಸ್ಥಾನ ಮೇರಿ ಹಿಲ್ ಬಂಡೊಟ್ಟುವಿನ ಜಾತ್ರಾ ಮಹೋತ್ಸವ ಅಂಗವಾಗಿ ಕೆಲ ಯುವಕರು ಬಲವಂತವಾಗಿ ಮುಸ್ಲಿಂರ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com