ರಾಜ್ಯದಲ್ಲಿ ಕೊರೋನಾ ಲಕ್ಷಣ ಸಹಿತ ರೋಗಿಗಳ ಸಂಖ್ಯೆ ಗಣನೀಯ ಏರಿಕೆ: ಹೆಚ್ಚಿದ ಆತಂಕ

ರಾಜ್ಯದಲ್ಲಿ ಕೊರೋನಾ ವೈರಸ್ ಲಕ್ಷಣ ಸಹಿತ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಲಕ್ಷಣ ಸಹಿತ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಜೂನ್ 29 ರಿಂದ ಜುಲೈ. 5ರವರೆಗೂ ಅಂದರೆ 7 ದಿನಗಳವರೆಗೂ ನಡೆದ ಕೊರೋನಾ ಪರೀಕ್ಷೆಯಲ್ಲಿ ಲಕ್ಷಣ ಇರುವ ರೋಗಿಗಳ ಶೇಕಡಾವಾರು 34.5ರಷ್ಟು ಏರಿಕೆ ಕಂಡಿದೆ. ಲಕ್ಷಣ ರಹಿತ ಪ್ರಕರಣಗಳು ಜೂನ್. ಮೊದಲವಾರದವರೆಗೂ ಶೇ.96ರಷ್ಟಿತ್ತು. ಇದೀಗ ಶೇ.65.5ಕ್ಕೆ ಇಳಿಕೆ ಕಂಡಿದೆ ಎಂದು ಕೋವಿಡ್ ವಾರ್ ರೂಮ್ ವರದಿಗಳು ತಿಳಿಸಿವೆ. 

ಈ ಅವಧಿಯಲ್ಲಿ, 10,824 ಪ್ರಕರಣಗಳು ವರದಿಯಾಗಿದ್ದು. ಜುಲೈ 6 ರಂತೆ ಜಿಲ್ಲಾವಾರು ರೋಗಲಕ್ಷಣ ಮತ್ತು ಲಕ್ಷಣರಹಿತ ಪ್ರಕರಣಗಳನ್ನು ಗಮನಿಸಿದರೆ ಲಕ್ಷಣರಹಿತ ರೋಗಿಗಳಿಗಿಂತ ಹೆಚ್ಚಿನ ರೋಗಲಕ್ಷಣ ಇರುವ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.  ಇವುಗಳಲ್ಲಿ ರಾಯಚೂರು 91.7%, ವಿಜಯಪುರ 67.3%, ಧಾರವಾಡ 60.5%, ಕೊಪ್ಪಲ್ 60% ಮತ್ತು ಮೈಸೂರು 54.7%ರಷ್ಟು ರೋಗಲಕ್ಷಣದ ಪ್ರಕರಣಗಳು ಕಂಡು ಬಂದಿದೆ. 

ಈ ಬೆಳವಣಿಗೆಯಲ್ಲಿ ಅನುಕೂಲ ಹಾಗೂ ಅನಾನುಕೂಲ ಎರಡೂ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಸಕ್ತ ತಿಂಗಳಿನಲ್ಲಿ ಸಾಕಷ್ಟು ಜನರಲ್ಲಿ ರೋಗ ಲಕ್ಷಣಗಳಾದ ತಲೆನೋವು, ಬಾಡಿ ಪೇನ್, ಗಂಟಲು ನೋವು, ರುಚಿ ತಿಳಿಯದೇ ಇರುವಂತಹ ಲಕ್ಷಣಗಳು ಕಂಡು ಬಂದಿದೆ. ಈ ಬೆಳವಣಿಗೆಗಳು ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತವೆ. ಲಕ್ಷಣ ಕಂಡು ಬಂದ ಕೂಡಲೇ ಜನರು ಪರೀಕ್ಷೆಗೊಳಗಾಗುತ್ತಾರೆ. ಕೂಡಲೇ ಕ್ವಾರಂಟೈನ್ ಗೊಳಗಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದ ಸೋಂಕು ಹರಡುವುದು ಕಡಿಮೆಯಾಗಲಿದೆ. ಲಕ್ಷಣ ರಹಿತ ಬೆಳವಣಿಗೆಗಳು ಸೋಂಕು ಮತ್ತಷ್ಟು ಹರಡುವಂತೆ ಮಾಡುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com