ಬೆಂಗಳೂರು: ಶುಕ್ರವಾರ ಮಾರತ್ ಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಆರು ವರ್ಷದ ಬಾಲಕಿಗಾಗಿ ಎನ್ ಡಿ ಆರ್ ಎಫ್ ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಮೂರನೇ ದಿನವೂ ಮುಂದುವರಿದಿದೆ. ಕೊಳೆಗೇರಿ ನಿವಾಸಿಗಳಿಗೆ ಕಾನೂನುಬಾಹಿರವಾಗಿ ಪ್ರದೇಶದಲ್ಲಿ ವಾಸಿಸಲು ಅವಕಾಶ ನೀಡಿದ ಆರೋಪ ಹೊತ್ತಿರುವ ಭೂಮಾಲೀಕ ರವಿ ಕುಮಾರ್ ಅವರನ್ನು ಪೊಲೀಸರು ಇನ್ನೂ ವಿಚಾರಣೆ ನಡೆಸಿಲ್ಲ.
ಭಾನುವಾರವೂ ಕೂಡ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಬಾಲಕಿ ಪತ್ತೆಯಾಗಿಲ್ಲ ಎಂದು ಹಿರಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಂದಿನ 2 ದಿನಗಳ ಕಾಲ ಶೋಧ ಕಾರ್ಯ ಮುಂದುವರಿಯಲಿದ್ದು, ಅನಂತರ ಮುಂದಿನ ನಿರ್ಧಾಕ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಈ ಸ್ಲಂ ನಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಿದ ಭೂ ಮಾಲಿಕನನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
Advertisement