ವಿಜಯಪುರ/ಯಾದಗಿರಿ: ಪಶ್ಚಿಮ ಘಟ್ಟಗಳು ಮತ್ತು ಕೃಷ್ಣ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ (ಆಲಮಟ್ಟಿ ಅಣೆಕಟ್ಟು) ನೀರಿನ ಮಟ್ಟ ಸೋಮವಾರ ಗರಿಷ್ಠ ಮಟ್ಟಕ್ಕೆ ಹತ್ತಿರ ತಲುಪಿದೆ.
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಮೂಲಗಳಂತೆ, ವಿಜಯಪುರ ಜಿಲ್ಲೆಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಪೂರ್ಣ ಮಟ್ಟವನ್ನು) ತಲುಪಲು ಕೇವಲ ಎರಡು ಮೀಟರ್ ಉಳಿದಿದೆ.
ಸೋಮವಾರ ಅಣೆಕಟ್ಟಿನ ನೀರಿನ ಮಟ್ಟ 517.20 ಮೀಟರ್ ತಲುಪಿದ್ದು, ಜಲಾಶಯದ ಗರಿಷ್ಠ ಮಟ್ಟ 519.6 ಮೀಟರ್ ಇದೆ.
Advertisement