ಹೊಸಪೇಟೆ: ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯ ಕೊಲೆ

ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸಪೇಟೆ: ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಹುಲಿಗೆಮ್ಮ (45) ಕೊಲೆಯಾದ ಮಹಿಳೆಯಾಗಿದ್ದು, ಹಲಗೇರಿ ಸಿದ್ಧಲಿಂಗಪ್ಪ ಹತ್ಯೆ ಮಾಡಿರುವ ವ್ಯಕ್ತಿಯಾಗಿದ್ದಾನೆ. ಸಿದ್ಧಲಿಂಗಪ್ಪ ಜೊತೆ ಸಂಬಂಧ ಹೊಂದಿದ್ದ ಮಹಿಳೆ ಹುಲಿಗೆಮ್ಮ "ಹೆಂಡತಿಯ ರೀತಿ ನಿನ್ನ ಜೊತೆ ಜೀವನ ಮಾಡಿದ್ದೇನೆ ನನಗೂ ಎರಡು ಎಕ್ಕರೆ ಜಮೀನು ಕೊಡು ಎಂದು ಬೇಡಿಕೆ" ಇಟ್ಟಿದ್ದರು, ಈ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ಧಲಿಂಗಪ್ಪ ಮಹಿಳೆಯನ್ನು ಕತ್ತುಹಿಸುಕಿ ಕೊಲೆ ಮಾಡಿ ತನ್ನ ಜಮೀನಿನಲ್ಲೇ ಹೂತುಹಾಕಿದ್ದಾನೆ.

ಗದ್ದಿಕೇರಿ ಮತ್ತು ಮೋರಗೇರಿ ಗ್ರಾಮದ ಮಧ್ಯಭಾಗದಲ್ಲಿ ಶವವನ್ನು ಹೂತಿಟ್ಟಿದ್ದು, ಕೊಲೆಯ ಆರೋಪಿ, ತಾಲೂಕಿನ ಮೋರಿಗೇರಿ ಗ್ರಾಮದ ಹಲಿಗೇರಿ ಸಿದ್ಲಿಂಗಪ್ಪ ತಂಬ್ರಳ್ಳಿ ಪೊಲೀಸರ ವಶದಲ್ಲಿದ್ದಾನೆ. ತಂಬ್ರಳ್ಳಿ ಪೊಲೀಸರು ಹೂತಿಟ್ಟ ಶವ ಹೊರ ತೆಗೆದು ತನಿಖೆಗೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com