ಬೆಂಗಳೂರು: ರಾಜ್ಯದ ಎಲ್ಲಾ 224 ಶಾಸಕರು ತಮ್ಮ ಕ್ಷೇತ್ರಗಳ ತಲಾ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕಾನೂನನ್ನು ಸಿಎಂ ಯಡಿಯೂರಪ್ಪ ಜಾರಿಗೆ ತರುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ,
ರಾಜ್ಯದಲ್ಲಿರುವ ಸುಮಾರು 54 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೆರವಿನ ಅಗತ್ಯವಿದೆ, ಹೀಗಾಗಿ ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಮುಂದಾಗಬೇಕೆ ಎಂದು ಸರ್ಕಾರಕ್ಕೆ ಪ್ರೊ.ಎಂಆರ್ ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಮಾಗಡಿ ಶಾಸಕ ಎ ಮಂಜುನಾಥ್ ಮೂರು ಸರ್ಕಾರಿ ಶಾಲೆಗಗಳನ್ನು ದತ್ತು ಪಡೆದಿದ್ದಾರೆ, ಹೀಗಾಗಿ ಉಳಿದ ಶಾಸಕರು ಕನಿಷ್ಠ ಮೂರು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕು ಎಂದು ದೊರೆಸ್ವಾಮಿ ಹೇಳಿದ್ದಾರೆ.
Advertisement