ಪೌರ ಕಾರ್ಮಿಕರ 'ಸುವಿಧಾ ಕ್ಯಾಬಿನ್' ಉದ್ಘಾಟಿಸಿದ ಡಾ. ಅಶ್ವತ್ಥನಾರಾಯಣ

ಪೌರ ಕಾರ್ಮಿಕರ ಅನುಕೂಲಕ್ಕಾಗಿ ಯಶವಂತಪುರದ  ಆರ್‌ಟಿಓ ಕಚೇರಿ ಆವರಣದಲ್ಲಿ  ನಿರ್ಮಿಸಿರುವ  'ಸುವಿಧಾ ಕ್ಯಾಬಿನ್' ಅನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸೋಮವಾರ ಉದ್ಘಾಟಿಸಿದರು. 
ಡಾ. ಅಶ್ವತ್ ನಾರಾಯಣ
ಡಾ. ಅಶ್ವತ್ ನಾರಾಯಣ

ಬೆಂಗಳೂರು: ಪೌರ ಕಾರ್ಮಿಕರ ಅನುಕೂಲಕ್ಕಾಗಿ ಯಶವಂತಪುರದ  ಆರ್‌ಟಿಓ ಕಚೇರಿ ಆವರಣದಲ್ಲಿ  ನಿರ್ಮಿಸಿರುವ  'ಸುವಿಧಾ ಕ್ಯಾಬಿನ್' ಅನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸೋಮವಾರ ಉದ್ಘಾಟಿಸಿದರು. 

ಸುವಿಧಾ  ಕ್ಯಾಬಿನ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈರ್ಮಲ್ಯಕ್ಕಾಗಿ ಪೌರ ಕಾರ್ಮಿಕರು ದಿನನಿತ್ಯ ಶ್ರಮಿಸುತ್ತಾರೆ.ಅವರ ಸುರಕ್ಷತೆ, ಯೋಗಕ್ಷೇಮ, ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸುವಿಧಾ ಕ್ಯಾಬಿನ್ ನಿರ್ಮಿಸಲಾಗಿದೆ ಎಂದರು.

ಬೆಳಗ್ಗೆ ಕೆಲಸ ಆರಂಭಿಸುವ  ಮೊದಲು  ತಮ್ಮ ವಸ್ತುಗಳನ್ನು ಇರಿಸಲು ಸುವಿಧಾ ಕ್ಯಾಬಿನ್‌ನಲ್ಲಿ ಸೂಕ್ತ  ಸ್ಥಳಾವಕಾಶವಿದೆ. ಜತೆಗೆ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪೌರ ಕಾರ್ಮಿಕರು  ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಿದರು. 

ಕಾರ್ಯಕ್ರಮದಲ್ಲಿ  ಬೆಂಗಳೂರಿನ ಮೇಯರ್‌ ಗೌತಮ್‌ ಕುಮಾರ್‌ ಜೈನ್‌,  ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ  ಅಧ್ಯಕ್ಷ ಮಂಜುನಾಥ ರಾಜು, ಬಿಬಿಎಂಪಿ ಆಯಕ್ತರು ಹಾಗೂ ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com