ಬೆಂಗಳೂರು: 4 ಸಾವಿರ ಕೋಟಿ ರೂಪಾಯಿಗಳ ಐಎಂಎ ಹಗರಣದಲ್ಲಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ,ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಬಿಎಂ ವಿಜಯಶಂಕರ್, ಮಾಜಿ ಉಪ ವಿಭಾಗೀಯ ಅಧಿಕಾರಿ ಎಲ್ ಸಿ ನಾಗರಾಜ್ ಮತ್ತು ಮಾಜಿ ಗ್ರಾಮ ಲೆಕ್ಕಿಗ ಎನ್ ಮಂಜುನಾಥ್ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐ ರಾಜ್ಯ ಸರ್ಕಾರದ ಅನುಮತಿ ಕೋರಿದೆ.
ಕರ್ನಾಟಕ ಹಣಕಾಸು ಸಂಸ್ಥೆ ಕಾಯ್ದೆಯಡಿ ಹೂಡಿಕೆದಾರರ ಹಿತರಕ್ಷಣೆ ಅಡಿ ವಿಜಯಶಂಕರ್ ಮತ್ತು ನಾಗರಾಜ್ ಫಲಾನುಭವಿಗಳಾಗಿದ್ದು ಇವರು ವಂಚನೆಯನ್ನು ಮುಚ್ಚಿಹಾಕಲು ಅಕ್ರಮವಾಗಿ ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
Advertisement