ಬೆಂಗಳೂರು: ರೌಡಿಶೀಟರ್ ಕೊಲೆಗೆ ಯತ್ನ; ಏಳು ಜನರ ಬಂಧನ

ಹಳೇ ವೈಷಮ್ಯದ ಹಿನ್ನಲೆಯಲ್ಲಿ ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್ ಓರ್ವನನ್ನು ಕೊಲೆ ಮಾಡಿ ಹವಾ ಎಬ್ಬಿಸಲು ಯತ್ನಿಸಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್ ಓರ್ವನನ್ನು ಕೊಲೆ ಮಾಡಿ ಹವಾ ಎಬ್ಬಿಸಲು ಯತ್ನಿಸಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ನವಾಜ್, ಸಯ್ಯದ್ ಶೋರಿಫ್, ಸಯ್ಯದ್ ಅರೀಫ್, ತಬ್ರೇಜ್ ಬೇಗ್, ಗಣೇಶ್ ಸೇರಿ 7 ಆರೋಪಿಗಳನ್ನು ಬಂಧಿಸಿದ್ದಾರೆ.

ಇದೇ ತಿಂಗಳ 6 ರಂದು ಕೋಗಿಲು ಬಳಿಯ ಬೆಳ್ಳಳ್ಳಿ ಕ್ರಾಸ್‌ ಸಮೀಪ ಯಲಹಂಕ ರೌಡಿಶೀಟರ್ ಲೋಕೇಶ್ ಅಲಿಯಾಸ್ ಲೋಕಿ ಮೇಲೆ ಗುಂಪೊಂದು ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಲೋಕಿ ಅವರ ತಾಯಿ ಮಹಾಲಕ್ಷ್ಮಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com